LATEST NEWS
ಅವನೊಬ್ಬ ಬಿಜೆಪಿಯಲ್ಲಿ ಜೋಕರ್ ಇದ್ದ ಹಾಗೆ….ಜೈಲಿಗೆ ಹಾಕೋದು ಕೋರ್ಟ್ ಇವನಲ್ಲ…!!
ಮಂಗಳೂರು ಜನವರಿ 05: ಜಿಲ್ಲೆಯಲ್ಲಿ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕುದ್ರೋಳಿ ದೇವಸ್ತಾನದಲ್ಲಿ ದೇವರ ದರ್ಶನ ಪಡೆದರು.
ಬಳಿಕ ಮಾತನಾಡಿದ ಅವರು ಲವ್ ಜಿಹಾದ್ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ‘ನಳಿನ್ ಕುಮಾರ್ ಪೆದ್ದು ಪೆದ್ದಾಗಿ ಮಾತನಾಡಿ ಬಿಜೆಪಿಯ ಜೋಕರ್ ಎನಿಸಿಕೊಂಡಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಲು ಅವರು ಯಾರು? ಜೈಲಿಗೆ ಕಳುಹಿಸುವುದು ನ್ಯಾಯಾಲಯವೇ ಹೊರತು ನಳಿನ್ ಕುಮಾರ್ ಅಲ್ಲ. ಕಾನೂನು ತಿಳಿಯದೆ ಮಾತನಾಡಿ ವಿದೂಷಕನಂತಾಗಿದ್ದಾರೆ’ ಎಂದರು. ನಾಯಿ ಮರಿ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು ನಾಯಿ ಮರಿ ಎಂದಿಲ್ಲ: ‘ಮುಖ್ಯಮಂತ್ರಿಯನ್ನು ನಾಯಿಮರಿ ಎಂದು ಹೇಳಿಲ್ಲ. ರಾಜ್ಯಕ್ಕೆ ಬೇಕಾದಷ್ಟು ಅನುದಾನ ತರಲು ಕೇಂದ್ರದ ಜೊತೆ ಮಾತನಾಡುವ ಧೈರ್ಯ ಬೇಕು ಎಂದಷ್ಟೆ ಹೇಳಿದ್ದೆ’ ಎಂದರು
You must be logged in to post a comment Login