FILM
ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ನಟಿ ಶುಭಾ ಪೂಂಜಾ…!!
ಮಂಗಳೂರು ಜೂನ್ 15: ಕನ್ನಡ ಚಿತ್ರರಂಗದ ಖ್ಯಾತ ನಟಿ ಕರಾವಳಿ ಬೆಡಗಿ ನಟಿ ಶುಭಾ ಪೂಂಜಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಲಾಕ್ ಡೌನ್ ನಡುವೆ ಕನ್ನಡ ಚಲನಚಿತ್ರರಂಗದಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿದ್ದು, ಇದಕ್ಕೆ ಇನ್ನೊಂದು ಸೇರ್ಪಡೆ ಮೊಗ್ಗಿನ ಮನಸ್ಸು ಖ್ಯಾತಿಯ ನಟಿ ಶುಭಾ ಪೂಂಜಾ.
ಜಯಕರ್ನಾಟಕ ಸಂಘಟೆನೆಯ ಮುಖಂಡ, ಉದ್ಯಮಿ ಸುಮಂತ್ ಮಹಾಬಲ ಅವರೊಂದಿಗೆ ವಿವಾಹವಾಗಲು ನಟಿ ಶುಭಾ ಪೂಂಜಾ ನಿರ್ಧರಿಸಿದ್ದಾರೆ. ಈ ಇಬ್ಬರ ವಿವಾಹ ಮಂಗಳೂರಿನಲ್ಲಿ ನೆರವೇರಿದರೆ ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಶುಭಾ ಪೂಂಜಾ ಅವರನ್ನು ಮದುವೆಯಾಗುತ್ತಿರುವ ಸುಮಂತ್ ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.ಈ ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಈ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯುವ ನಿರೀಕ್ಷೆ ಇದೆ. ತ್ರಿದೇವಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ನಟಿ ಶುಭಾ ಸಧ್ಯ ರೈಮ್ಸ್ ಚಿತ್ರದಲ್ಲಿ ಟಿವಿ ವಾಹಿನಿಯೊಂದರ ನಿರೂಪಕಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.
You must be logged in to post a comment Login