KARNATAKA
ರಾಯಚೂರು : ವೈದ್ಯರ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ..!
ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ಮುಖ್ಯವೈದ್ಯರಾದ ಡಾ. ಜಯಪ್ರಕಾಶ್ ಪಾಟೀಲ್ ಬೆಟ್ಟದೂರು ಅವರ ಕಾರಿನ ಮೇಲೆ ಇಂದು(ಗುರುವಾರ) ಗುಂಡಿನ ದಾಳಿ ನಡೆದಿದೆ.
ರಾಯಚೂರು : ರಾಯಚೂರಿನ ಬೆಟ್ಟದೂರು ಆಸ್ಪತ್ರೆಯ ಮುಖ್ಯವೈದ್ಯರಾದ ಡಾ. ಜಯಪ್ರಕಾಶ್ ಪಾಟೀಲ್ ಬೆಟ್ಟದೂರು ಅವರ ಕಾರಿನ ಮೇಲೆ ಇಂದು(ಗುರುವಾರ) ಗುಂಡಿನ ದಾಳಿ ನಡೆದಿದೆ.
ಅಪರಾಹ್ನ ಸಮಯದಲ್ಲಿ ರಾಯಚೂರು ಹೊರ ವಲಯದ ಸಾತ್ ಮೈಲ್ ಹತ್ತಿರ ಅಪರಿಚಿತರಿಂದ ಈ ಗುಂಡಿನ ದಾಳಿ ನಡೆದಿದ್ದು ಡಾ.ಜಯಪ್ರಕಾಶ್ ಪಾಟೀಲ್ ಅವರು ದಾಳಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ.
ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳು ಏಕಾಎಕಿ ವೈದ್ಯರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ.
ಮೇಲ್ನೋಟಕ್ಕೆ ಗುಂಡಿನ ದಾಳಿ ಹಿಂದೆ ಯಾರೋ ಅಪರಿಚಿತರು ವೈದ್ಯರಿಗೆ ಕರೆಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು, ಅವರಿಗೆ ವೈದ್ಯರು ಹಣ ನೀಡದೆ ಇರುವುದಕ್ಕೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಘಟನೆ ಕುರಿತು ರಾಯಚೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಎಸ್ ಪಿ ಹಾಗೂ ಇನ್ಸ್ಪೆಕ್ಟರ್ ಭೇಟಿ ನೀಡಿ ಆರೋಪಿಗಳನ್ನು ಹುಡುಕಲು ಜಾಲ ಬಿಸಿದ್ದಾರೆ.
You must be logged in to post a comment Login