KARNATAKA
ಗೋ ಬ್ಯಾಕ್ ಶೋಭಾ ಅಭಿಯಾನ – ಯಾರು ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರಿಂದ ಇಂತಹ ಕೆಲಸ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಚಿಕ್ಕಮಗಳೂರು ಫೆಬ್ರವರಿ 24: ಉಡುಪಿ ಚಿಕ್ಕಮಗಳೂರಿನ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ದದ ಗೋ ಬ್ಯಾಕ್ ಶೋಭಾ ಅಭಿಯಾನಕ್ಕೆ ಗರಂ ಆಗಿದ್ದು, ಯಾರು ಅಧಿಕಾರಕ್ಕಾಗಿ ಪಕ್ಷಕ್ಕೆ ಬರುತ್ತಾರೆ ಅವರು ಇಂತಹ ಕೆಲಸ ಮಾಡುತ್ತಾರೆ. ಹಿಂದೆ ಇದ್ದ ಪಾರ್ಟಿಯಲ್ಲಿ ಇದೇ ಕೆಲಸ ಮಾಡಿಕೊಂಡು ಬಂದವರು, ಇಂತಹ ಅಭಿಯಾನಕ್ಕೆ ಯಾರೋ ಸ್ಪಾನ್ಸರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಯಾವುದೇ ಒಂದು ಕಂಟ್ರಾಕ್ಟರ್ ಜೊತೆ ನಾನು ಚಹಾ ಕೂಡ ಕುಡಿದಿಲ್ಲ. ಕಂಟ್ರಾಕ್ಟರ್ ಮುಖವನ್ನು ನೋಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೇಂದ್ರದ ಯೋಜನೆಗಳನ್ನ ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಟಿಕೆಟ್ ಕೇಳುವವರು ವಿರೋಧ ಮಾಡುತ್ತಾರೆ, ಆದರೆ ಒಬ್ಬರನ್ನ ತೇಜೋವಧೆ ಮಾಡುವುದು ತಪ್ಪು. ಟಿಕೆಟ್ ಕೇಳುವುದು ತಪ್ಪಲ್ಲ, ಟಿಕೆಟ್ ಕೇಳುವುದಕ್ಕೂ ರೀತಿಗಳಿರುತ್ತೆ. ತೇಜೋವಧೆ ಮಾಡಿ ಟಿಕೆಟ್ ಕೇಳುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ನನ್ನ ವಿರೋಧ ಮಾಡುವರಿಗೂ ಆಹ್ವಾನ ನೀಡುತ್ತೇನೆ. ಅಭಿವೃದ್ಧಿ ಹೆಸರಲ್ಲಿ ಚರ್ಚೆ ಆಗ್ಬೇಕು ಮುಕ್ತ ಅವಕಾಶ ಇದೆ ಬನ್ನಿ ಚರ್ಚೆಗೆ, ಇಂತಹ ವಿರೋಧಗಳಿದ್ದಾಗ ಗಟ್ಟಿಯಾಗುತ್ತೇವೆ ಎಂದು ಹೇಳಿದರು. ಅಪಮಾನ ಅನವಶ್ಯಕ ಅಪಪ್ರಚಾರ ಮಾಡುವುದು ಸರಿಯಲ್ಲ. ಯಾರೋ ವಿರೋಧ, ಪರ ಮಾತನಾಡಿದರು, ಅಭಿಯಾನ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
You must be logged in to post a comment Login