LATEST NEWS
ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಡ್ಲೆಪುರಿ ತಿಂತಿದ್ದಾರಾ ? – ಶೋಭಾ ಕರಂದ್ಲಾಜೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಡ್ಲೆಪುರಿ ತಿಂತಿದ್ದಾರಾ ? – ಶೋಭಾ ಕರಂದ್ಲಾಜೆ
ಉಡುಪಿ ಮಾರ್ಚ್ 5: ಮಹಾರಾಷ್ಟ್ರ, ಉತ್ತರಪ್ರದೇಶದಿಂದ ಶಸ್ತ್ರಾಸ್ತ್ರ ಬರುತ್ತಿದೆ ಎಂಬ ಗೃಹಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಶೋಭಾಕರಂದ್ಲಾಜೆ ಯಾವುದೇ ರಾಜ್ಯದಿಂದ ಶಸ್ತ್ರಾಸ್ತ್ರ ಬರುತ್ತಿದೆ, ಕ್ರಿಮಿನಲ್ಸ್ ಬರುತ್ತಿದ್ದಾರೆ ಅಂದರೆ ಅದನ್ನು ತಡೆಯಲು ಗೃಹಸಚಿವರು ಕ್ರಮಕೈಗೊಳ್ಳಬೇಕು ಅದನ್ನು ಬಿಟ್ಟು ಅಸಂಬದ್ಧ ಹೇಳಿಕೆ ನೀಡ್ತಾ ಇದ್ದಾರೆ ಎಂದು ಆರೋಪಿಸಿದರು. ಕಾನೂನು ವ್ಯವಸ್ಥೆ ಕಾಪಾಡುವ ಬದಲು ಗೃಹಸಚಿವರಾಗಿ ರಾಮಲಿಂಗ ರೆಡ್ಡಿ ಕಡ್ಲೆಪುರಿ ತಿನ್ತಿದ್ದಾರಾ ಎಂದು ತಿರುಗೇಟು ನೀಡಿದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಗೃಹ ಸಚಿವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುವುದನ್ನು ನಿಲ್ಲಿಸಿ ಜನರನ್ನು, ಹಿಂದೂ ಯುವಕರನ್ನು ರಕ್ಷಣೆ ಮಾಡಲಿ ಇದು ಸಾಧ್ಯವಿಲ್ಲದೆ ಇದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಹೇಳಿದರು.
You must be logged in to post a comment Login