DAKSHINA KANNADA
ಕೊರಗಜ್ಜನ ಆದಿಸ್ಥಳ ಕುತ್ತಾರುಗೆ ಕುಟುಂಬ ಸಮೇತ ಭೇಟಿ ನೀಡಿದ ಶಿವಣ್ಣ
ಮಂಗಳೂರು, ಡಿಸೆಂಬರ್ 10: ವೇದ ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಆಗಮಿಸಿರುವ ಶಿವರಾಜ್ ಕುಮಾರ್ ಇಂದು ಕೊರಗಜ್ಜನ ಆದಿಸ್ಥಳ ಕುತ್ತಾರುಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ.
ಪತ್ನಿ ಗೀತಾ,ಮಗಳೊಂದಿಗೆ ಕುತ್ತಾರು ಗೆ ಶಿವಣ್ಣ ಭೇಟಿ ನೀಡಿದ್ದು, ಕೊರಗಜ್ಜ ನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟು ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ನಿಗೆ ವೇದ ಚಿತ್ರ ತಂಡ ಸಾಥ್ ನೀಡಿದೆ.
ವೇದ ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಆಗಮಿಸಿರುವ ಶಿವಣ್ಣ, ಇಂದು ಸಂಜೆ ಪಣಂಬೂರು ಕಡಲಕಿನಾರೆಯಲ್ಲಿ ನಡೆಯಲಿರುವ ವೇದ ಚಿತ್ರದ ಪ್ರಮೋಶನ್ ನಲ್ಲಿ ಭಾಗವಹಿಸಲ್ಲಿದ್ದಾರೆ.
You must be logged in to post a comment Login