Connect with us

KARNATAKA

ಶಿವಮೊಗ್ಗ : ಆಯನೂರು‌ ನಾಡ ಕಚೇರಿಯ ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ..!

Share Information

ಆಯನೂರು ನಾಡ ಕಚೇರಿಯ ಉಪ ತಹಶೀಲ್ದಾರ್​ ಬಗರ್​ ಹುಕುಂ ಭೂಮಿಗೆ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗ: ಆಯನೂರು ನಾಡ ಕಚೇರಿಯ ಉಪ ತಹಶೀಲ್ದಾರ್​ ಬಗರ್​ ಹುಕುಂ ಭೂಮಿಗೆ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುವಾಗ ಪರಮೇಶ್ ನಾಯ್ಕ್ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಡಿವೈಎಸ್ಪಿ ಈಶ್ವರ ನಾಯಕ್ ತಂಡದ ಬಲೆಗೆ ಬಿದ್ದಿದ್ದಾರೆ.

ಶಿವರಾಜ್ ಅಬ್ಬಲಗೆರೆ ನಿವಾಸಿಯಾಗಿದ್ದು, ಇವರು ಕ್ಯಾತನಕೊಪ್ಪ ಗ್ರಾಮದ ಬಳಿಯ ಎರಡು ಎಕರೆ ಬಗರ್ ಹುಕುಂ ಭೂಮಿ ಖಾತೆಗೆ ಸೇರಿಸುವಂತೆ ಬ್ರೋಕರ್ ಪ್ರಕಾಶ್ ಎಂಬುವರ ಮೂಲಕ ಉಪ ತಹಶೀಲ್ದಾರ್​ರೊಂದಿಗೆ ಮಾತನಾಡಿದ್ದರು.

ಖಾತೆ ಮಾಡಿಕೊಡಲು 40 ಸಾವಿರ ರೂ. ನೀಡಬೇಕೆಂದು ಮಾತುಕತೆ ಆಗಿತ್ತು. ಇಂದು 30 ಸಾವಿರ ರೂ. ನೀಡುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಉಪ ತಹಶೀಲ್ದಾರ್ ಜೊತೆಗೆ ಬ್ರೋಕರ್​ ಸಹ ಸಿಕ್ಕಿಬಿದ್ದಿದ್ದಾನೆ.

ಹೊಳಲೂರು ನಾಡ ಕಚೇರಿಯಲ್ಲಿ ಈ ಹಿಂದೆ ಸಹ ಅಕ್ರಮವಾಗಿ ಬಗರ್ ಹುಕುಂ ಭೂಮಿಗೆ ಖಾತೆ ಮಾಡಿಸಿಡಲಾಗಿತ್ತು.

ಇದಕ್ಕಾಗಿ ಲಕ್ಷಾಂತರ ರೂ. ಹಣ ಪಡೆದು‌ಕೊಂಡು ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದರು ಎಂಬ ಆರೋಪವಿತ್ತು.


Share Information
Advertisement
Click to comment

You must be logged in to post a comment Login

Leave a Reply