LATEST NEWS
ಉಡುಪಿ ಹಿಂದೂ ಸಮಾಜೋತ್ಸವ – ಶರಣ್ ಪಂಪ್ ವೆಲ್ ಗೆ ಉಡುಪಿ ಪ್ರವೇಶಿಸದಂತೆ ನಿರ್ಬಂಧ
ಉಡುಪಿ ಅಕ್ಟೋಬರ್ 10: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಸಮಾರಂಭ ಹಾಗೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಗೆ ಪೊಲೀಸ್ ಇಲಾಕೆ ನಿರ್ಬಂಧ ವಿಧಿಸಿದ್ದು, ಉಡುಪಿ ಪ್ರವೇಶಿಸದಂತೆ ತಡೆದಿದೆ.
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಸಮಾರಂಭದ ಹಿನ್ನಲೆ ಉಡುಪಿ ಎಂಜಿಎಂ ಕ್ರೀಡಾಂಗಣದಲ್ಲಿ ಬೃಹತ್ ಹಿಂದು ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ
ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮುಖಂಡ ಶರಣ್ ಪಂಪ್ ವೆಲ್ ಭಾಗವಹಿಸಲು ಉಡುಪಿಗೆ ತೆರಳಿದ್ದರು. ಆದರೆ ಈ ಹಿಂದೆ ಪ್ರಚೋದನಾಕಾರಿ ಭಾಷಣ ಹಿನ್ನೆಲೆ ಶರಣ್ ಪಂಪ್ ವೆಲ್ ಮೇಲೆ ಉಡುಪಿಯಲ್ಲಿ ಸುಮೋಟೊ ಕೇಸ್ ಆಗಿರುವುದರಿಂದ ಸದ್ಯ ಷರತ್ತುಬದ್ದ ಜಾಮೀನಿನಲ್ಲಿರೋ ಶರಣ್ ಪಂಪ್ ವೆಲ್ ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸರು ಉಡುಪಿಗೆ ಪ್ರವೇಶಿದಂತೆ ನಿರ್ಬಂಧ ಹೇರಿದ್ದಾರೆ. ಈ ಹಿನ್ನಲೆ ಉಡುಪಿಗೆ ತೆರಳದೇ ಮಂಗಳೂರಿಗೆ ಶರಣ್ ಪಂಪ್ ವೆಲ್ ವಾಪಾಸಾಗಿದ್ದಾರೆ.
You must be logged in to post a comment Login