Connect with us

KARNATAKA

ರಸ್ತೆಗುಂಡಿ ತಪ್ಪಿಸುವ ಭರದಲ್ಲಿ ಬಿದ್ದ ದಂಪತಿ ಮೇಲೆ ಹರಿದ ಶಾಲಾ ವಾಹನ – ಗೃಹಿಣಿ ಸ್ಥಳದಲ್ಲೇ ಸಾವು..!

ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಗೃಹಿಣಿ ಮೇಲೆ ಶಾಲಾ ವಾಹನ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು : ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಗೃಹಿಣಿ ಮೇಲೆ ಶಾಲಾ ವಾಹನ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಾಗಡಿ ರಸ್ತೆ ಸಮೀಪದ ಶ್ರೇಯಾ ಲೇಔಟ್ ನಿವಾಸಿ ಸುಮಂಗಲ (58) ಮೃತ ಗೃಹಿಣಿಯಾಗಿದ್ದು ಇಂದು(ಗುರುವಾರ) ಚಿಕ್ಕಗೊಲ್ಲರಹಟ್ಟಿಯಲ್ಲಿ ದ್ವಿಚಕ್ರ ವಾಹನದಲ್ಲಿ ಪತಿ ಶರಣಪ್ಪ ಜೊತೆಯಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಹಿಂದಿನಿಂದ ವೇಗವಾಗಿ ಬಂದ ಶಾಲಾ ವಾಹನ ಸಮಂಗಲ ತಲೆ ಮೇಲೆ ಹರಿದ ಪರಿಣಾಮ ಗೃಹಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶರಣಪ್ಪಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಶಾಲಾ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಕಣ್ಣೆದುರಿಗೆ ಪ್ರಾಣ ಕಳೆದುಕೊಂಡ ಪತ್ನಿಯ ಶವದ ಮುಂದೆ ಪತಿ ಶರಣಪ್ಪ ರೋದಿಸುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *