Connect with us

    LATEST NEWS

    ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ

    ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ

    ಮಂಗಳೂರು ಸೆಪ್ಟೆಂಬರ್ 8: ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ ದ.ಕ ಜಿಲ್ಲೆ ಇದರ ಚುನಾವಣಾ ಪ್ರಕ್ರಿಯೆ ಹಾಗೂ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಮಂಗಳೂರಿನ ಕರಾವಳಿ ಸಭಾ ಭವನದಲ್ಲಿ ಇಂದು ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಸಲಹೆಗಾರರಾದ ಫಯಾಝ್ ದೊಡ್ಡಮನೆ ವಹಿಸಿ ಮಾತನಾಡಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಯಾಗಿದ್ದು ಹಲವಾರು ರಾಜಕೀಯ ನಾಯಕರ ವಿವಿಧ ವಿದ್ಯಾರ್ಥಿ ಒಕ್ಕೂಟಗಳು ಅಸ್ತಿತ್ವದಲ್ಲಿದೆ.

    ವಿದ್ಯಾರ್ಥಿಗಳನ್ನು ತಮ್ಮ ರಾಜಕೀಯ ಚಟುವಟಿಕೆಗಳ ವಸ್ತುವಾಗಿ ಬಳಸಿ ಮತ್ತು ಹಣದ ವ್ಯಾಮೋಹಕ್ಕೆ ಬಲಿಯಾಗಿಸಿ ನೈಜ ವಿದ್ಯಾರ್ಥಿ ಒಕ್ಕೂಟಗಳ ಮೌಲ್ಯಗಳನ್ನು ಕಸಿಯಲಾಗುತ್ತಿದೆ. ವಿದ್ಯಾರ್ಥಿ ಒಕ್ಕೂಟದ ನೈಜ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಮಗ್ರತೆ, ನಾಯಕತ್ವ ಹಾಗೂ ಅಧಿಕಾರವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸಲು ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

    ನೂತನ ಸಮಿತಿ ರಚನೆ :

    ಜಿಲ್ಲಾಧ್ಯಕ್ಷರಾಗಿ ಸೈಯದ್ ಅಫ್ರೀದ್ ಉಪಾಧ್ಯಕ್ಷಾರಾಗಿ ತಾಜುದ್ದೀನ್, ಫಾತಿಮಾ ಸೈಫಾ, ನೌಫಲ್ ಉಪ್ಪಿನಂಗಡಿ, ಶಿಹಾಬ್ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿಗಳಾಗಿ ಅಶ್ವರ್ ಮಹಮ್ಮದ್ ನಿಝಾಂ ಕಾರ್ಯದರ್ಶಿಗಳಾಗಿ ಹಾಶಿಂ ಮತ್ತು ಫಾತಿಮ ಬುಶ್ರಾ ಬೆಳ್ತಂಗಡಿ, ಸಕೀನಾ ಮುನವ್ವರ ಮತ್ತು ಅಬ್ದುಲ್ ಖಾದರ್.

    ತಾಲೂಕು ಪದಾಧಿಕಾರಿಗಳಾಗಿ ವಿವರ

    ಬಂಟ್ವಾಳ ಅಧ್ಯಕ್ಷ ಝಿಯಾನ್, ಕಾರ್ಯದರ್ಶಿಯಾಗಿ ಸಿನಾನ್ ಮತ್ತು ಉಪಧ್ಯಕ್ಷರಾಗಿ ನಜೀಬ್, ಪುತ್ತೂರು ಅಧ್ಯಕ್ಷರಾಗಿ ಸಾಬಿತ್, ಉಪಾಧ್ಯಕ್ಷರಾಗಿ ಇರ್ಶಾದ್ ,ಮುಕ್ತಾರ್ ಕಾರ್ಯದರ್ಶಿಯಾಗಿ ಗರೀಬ್ ನವಾಝ್, ಸಂಘಟನಾ ಕಾರ್ಯದರ್ಶಿಯಾಗಿ ಆಸಿಫ್, ಬೆಳ್ತಂಗಡಿ ಅಧ್ಯಕ್ಷರಾಗಿ ಫಾಝಿಲ್, ಉಪಾಧ್ಯಕ್ಷರಾಗಿ ಮನ್ಸೂರ್, ಸಂಘಟನಾ ಕಾರ್ಯದರ್ಶಿಯಾಗಿ ಮಿಜಾಝ, ಮಂಗಳೂರು ತಾಲೂಕು ಅಧ್ಯಕ್ಷರಾಗಿ ಮುನೀರ್ ಉಪಧ್ಯಕ್ಷರಾಗಿ ಶಫೀರ್ ಕಾರ್ಯದರ್ಶಿಯಾಗಿ ರಾಝಾ ಹಸನ್ ಹಾಗೂ ಶಫೀಕ್ ಕೋಡಿ ಸಂಘಟನಾ ಕಾರ್ಯದರ್ಶಿಯಾಗಿ ಬಾತಿಷ್ ಹಾಗೂ ಮುಸ್ತಫಾ ಮಂಗಳೂರು ನಗರಾಧ್ಯಕ್ಷರಾಗಿ ಹರ್ಷದ್ ರೊಜಾರಿಯೋ ಕಾಲೇಜು, ಉಪಾಧ್ಯಕ್ಷರಾಗಿ ಅಬ್ದುಲ್ ಬಾಸಿತ್ ಎ.ಜೆ ಕಾಲೇಜು, ಕಾರ್ಯದರ್ಶಿಯಾಗಿ ಆಕಿಫ್ ಅಲೋಶಿಯಸ್ ಕಾಲೇಜು , ರಕೀಬ್ ತಲಪಾಡಿ ಅಮೃತ್ ಪಡೀಲ್ ಕಾಲೇಜು, ಸಂಘಟನಾ ಕಾರ್ಯದರ್ಶಿಯಾಗಿ ಹಫೀಝ್ ಬದ್ರಿಯಾ ಆಯ್ಕೆಯಾದರು.

    Share Information
    Advertisement
    Click to comment

    You must be logged in to post a comment Login

    Leave a Reply