Connect with us

    LATEST NEWS

    ಸೆಪ್ಟಂಬರ್ 10ರ ಭಾರತ್ ಬಂದ್ ಗೆ ಬಂದರು ಶ್ರಮಿಕರ ಸಂಘ ಬೆಂಬಲ

    ಸೆಪ್ಟಂಬರ್ 10ರ ಭಾರತ್ ಬಂದ್ ಗೆ ಬಂದರು ಶ್ರಮಿಕರ ಸಂಘ ಬೆಂಬಲ

    ಮಂಗಳೂರು ಸೆಪ್ಟೆಂಬರ್ 8: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಸೆಪ್ಟಂಬರ್ 10ರ ಭಾರತ್ ಬಂದ್ ಗೆ ಬಂದರು ಶ್ರಮಿಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.

    ಇಂದು ಬೆಳಿಗ್ಗೆ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ವ್ಯವಹಾರಗಳು ಆರಂಭವಾಗುತ್ತಿದ್ದಂತೆ ಕಾರ್ಮಿಕರ ಕಟ್ಟೆಯ ಬಳಿ ಜಮಾಯಿಸಿದ ಕಾರ್ಮಿಕರು ಮಾರುಕಟ್ಟೆಯಾದ್ಯಂತ ಮೋದಿ ಸರಕಾರದ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗುತ್ತಾ ಭಾರತ್ ಬಂದ್ ಗೆ ಬೆಂಬಲ ಯಾಚಿಸುತ್ತಾ ಮೆರವಣಿಗೆ ನಡೆಸಿದರು.

    ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ಪಿ.ಎಸ್ ವಿಲ್ಲಿ ವಿಲ್ಸನ್,ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್,ಮುಖಂಡರಾದ ಹರೀಶ್ ಕೆರೆಬೈಲ್,ಮೊಹಮ್ಮದ್ ಮೋನು,ಚಂದ್ರಹಾಸ್ ಬಬ್ಬುಕಟ್ಟೆ,ಹಸನ್ ಮೋನು ಮತ್ತಿತರರು ಉಪಸ್ಥಿತರಿದ್ದರು..

    Share Information
    Advertisement
    Click to comment

    You must be logged in to post a comment Login

    Leave a Reply