LATEST NEWS
ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಸಪ್ತಮಿ ಗೌಡ
ಮಂಗಳೂರು ನವೆಂಬರ್ 16: ಕಾಂತಾರ ಸಿನೆಮಾ 50 ದಿನ ಪೂರೈಸಿದ ಬೆನ್ನಲ್ಲೆ ನಟಿ ಸಪ್ತಮಿ ಗೌಡ ಕರಾವಳಿಯ ತೀರ್ಥ ಕ್ಷೇತ್ರಗಳಲ್ಲಿ ದರ್ಶನದಲ್ಲಿ ಬಿಸಿಯಾಗಿದ್ದಾರೆ. ನಿನ್ನೆ ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದ ಸಪ್ತಮಿ ಗೌಡ ಇಂದು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಾಂತಾರ ಖ್ಯಾತಿಯ ನಟಿ ಸಪ್ತಮಿಗೌಡ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇವರನ್ನು ದೇವಳದ ವತಿಯಿಂದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಪ್ತಮಿ ಗೌಡ ‘ಕಾಂತಾರ ಯಶಸಿಸ್ಸಿನ ಬಗ್ಗೆ ಹೆಮ್ಮೆ ಇದೆ, ತುಳುನಾಡಿನ ದೈವಾರಾಧನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ, ಕಾಂತಾರಾ ಚಿತ್ರದ ನಂತರ ತಿಳಿದುಕೊಂಡೆ, ಬೇರೆ ಬೇರೆ ನಿನಿಮಾದ ಬಗ್ಗೆ ಮಾತುಕತೆ ನಡೆಯುತಿದೆ, ತುಳುವಲ್ಲಿ ಅವಕಾಶ ಸಿಕ್ಕಿದೆ ಖಂಡಿತ ನಟಿಸುವೆ ಎಂದರು. ಸಪ್ತಮಿ ಜೊತೆ ನಟ ಸನಿಲ್ ಗುರು, ತಾಯಿ ಶಾಂತಿ ಇದ್ದರು.
ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಪ್ರಸಾದ ನೀಡಿ ಗೌರವಿಸಿದರು. ಸಪ್ತಮಿ ಜೊತೆ ಅಭಿಮಾನಿಗಳು ಸೆಲ್ಪಿಗಾಗಿ ಮುಗಿ ಬಿದ್ದರು.
You must be logged in to post a comment Login