LATEST NEWS
ಮಹಾಕುಂಭಮೇಳಕ್ಕೆ ಸಾಗರದಂತೆ ಹರಿದು ಬರುತ್ತಿರುವ ಭಕ್ತರು – ರೈಲ್ವೆ ನಿಲ್ದಾಣವನ್ನೇ ಬಂದ್ ಮಾಡಿದ ಜಿಲ್ಲಾಡಳಿತ

ಪ್ರಯಾಗ್ ರಾಜ್ ಫೆಬ್ರವರಿ 10: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇದೀಗ ಮಹಾ ಕುಂಭಮೇಳದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ, ಪ್ರಯಾಗ್ರಾಜ್ ಜಿಲ್ಲಾಡಳಿತವು ಸಂಗಮ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರನ್ನು ನಿರ್ವಹಿಸಲು ಇದನ್ನು ಮಾಡಲಾಗಿದೆ.
ಪ್ರಯಾಗ್ರಾಜ್ ಜಿಲ್ಲಾಡಳಿತದ ಆದೇಶದಂತೆ, ಉತ್ತರ ರೈಲ್ವೆ ಲಕ್ನೋ ವಿಭಾಗದ ಪ್ರಯಾಗ್ರಾಜ್ ರಾಜ್ ಸಂಗಮ್ ನಿಲ್ದಾಣವು ಫೆಬ್ರವರಿ 9 ರಂದು ಮಧ್ಯಾಹ್ನ 1:30 ರಿಂದ ಫೆಬ್ರವರಿ 14 ರ ಮಧ್ಯರಾತ್ರಿ 12:00 ರವರೆಗೆ ಪ್ರಯಾಣಿಕರ ಸಂಚಾರಕ್ಕೆ ಬಂದ್ ಮಾಡಿದೆ. ಆದರೆ ಮಹಾಕುಂಭ ಪ್ರದೇಶದಲ್ಲಿ ಬರುವ ಇತರ 8 ನಿಲ್ದಾಣಗಳಾದ ಪ್ರಯಾಗ್ರಾಜ್ ಛೋಕಿ, ನೈನಿ, ಪ್ರಯಾಗ್ರಾಜ್ ಜಂಕ್ಷನ್, ಸುಬೇದಾರ್ಗಂಜ್, ಪ್ರಯಾಗ್, ಫಾಫಮೌ, ಪ್ರಯಾಗ್ರಾಜ್ ರಾಂಬಾಗ್ ಮತ್ತು ಝುಸಿಗಳಿಂದ ನಿಯಮಿತ ಮತ್ತು ವಿಶೇಷ ರೈಲುಗಳು ಚಲಿಸುತ್ತಿವೆ” ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.

ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಪ್ರಯಾಗರಾಜ್ ಜಂಕ್ಷನ್ ನಿಲ್ದಾಣದಲ್ಲಿ ಉತ್ತರ ಮಧ್ಯ ರೈಲ್ವೆ ಏಕ ದಿಕ್ಕಿನ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ನಗರದ ಕಡೆಯಿಂದ (ಪ್ಲಾಟ್ಫಾರ್ಮ್ ನಂ.1 ಕಡೆಗೆ) ಮಾತ್ರ ಪ್ರವೇಶ ನೀಡಲಾಗುವುದು ಮತ್ತು ಸಿವಿಲ್ ಲೈನ್ಸ್ ಕಡೆಯಿಂದ ಮಾತ್ರ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು ಎಂದು ಉತ್ತರ ಮಧ್ಯ ರೈಲ್ವೆ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಮಾಳವಿಯಾ ತಿಳಿಸಿದ್ದಾರೆ.