Connect with us

LATEST NEWS

ಸಾಲಿಗ್ರಾಮ – ನರ್ತಕಿ ಬಾರ್ ನಲ್ಲಿ ಮಾಲೀಕನ ಮೇಲೆ ಹಲ್ಲೆ – ಐದು ಮಂದಿ ಅರೆಸ್ಟ್

ಉಡುಪಿ ಫೆಬ್ರವರಿ 4: ದುಷ್ಕರ್ಮಿಗಳ ಗುಂಪೊಂದು ಬಾರ್ ನಲ್ಲಿ ಗಲಾಟೆ ನಡೆಸಿ ಮಾಲೀಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಸಾಲಿಗ್ರಾಮದ ಚಿತ್ರಪಾಡಿಯಲ್ಲಿರುವ ನರ್ತಕಿ ಬಾರ್ ನಲ್ಲಿ ನಡೆದಿದೆ. ಗಲಾಟೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಲಿಗ್ರಾಮದ ಚಿತ್ರಪಾಡಿ ಬಳಿ ಇರುವ ನರ್ತಕಿ ಬಾರ್ ನಲ್ಲಿ ಈ ಗಲಾಟೆ ನಡೆದಿದ್ದು, ಬಾರ್ ಮಾಲೀಕ ರಿತೇಶ್‌ ಮೇಲೆ ಹಲ್ಲೆ ನಡೆಸಲಾಗಿದೆ.


ಮದ್ಯ ಸೇವನೆ ಮಾಡುವ ನೆಪದಲ್ಲಿ ಬಂದಿದ್ದ 5 ಮಂದಿ ದುಷ್ಕರ್ಮಿಗಳು, ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿ ಬಾರ್ ಮಾಲೀಕ ರಿತೇಶ್‌ನನ್ನು ನೆಲಕುರುಳಿಸಿ ಚಪ್ಪಲಿಯಿಂದ ತುಳಿದ ಹಲ್ಲೆ ನಡೆಸಿದ್ದಾರೆ.

ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರನ್ನು ರೋಹಿತ್, ರಂಜಿತ್, ಸಚಿನ್ ಶಶಾಂಕ್ ವಿಘ್ನೇಶ್ ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Advertisement
Click to comment

You must be logged in to post a comment Login

Leave a Reply