Connect with us

    DAKSHINA KANNADA

    ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮತ್ತೆ ಹರಿಹಾಯ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

    ಪುತ್ತೂರು, ಮೇ 04: ಮಾತೃ ಪೂಜನಾ ಕಾರ್ಯಕ್ರಮದಲ್ಲಿ ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮತ್ತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹರಿಹಾಯ್ದಿದ್ದಾರೆ.

    ಅರುಣ್ ಪುತ್ತಿಲರ ಗ್ರಾಮದಲ್ಲಿ ನಡೆದ ಮಾತೃ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ ಭಟ್, ಬಿಜೆಪಿ ಸದಸ್ಯರು ಯರಾದ್ರೂ ತಪ್ಪು ಮಾಡಿದ್ರೆ ಅವ್ರನ್ನ ಕೇಳೋರು ಇದ್ದಾರೆ. ತಪ್ಪಾಗಿದ್ರೆ ಅವ್ರನ್ನ ತಿದ್ದಿ ಸರಿಯಾಗಿ ಹೋಗೋ ಅಂತ ಹೇಳೋಕೆ ಪಕ್ಷ ಇದೆ.

    ಆದ್ರೆ ಸ್ವತಂತ್ರ ಅಭ್ಯರ್ಥಿಯನ್ನ ಪ್ರಶ್ನೆ ಮಾಡೋಕೆ ಯಾರಿದ್ದಾರೆ..? ಸ್ವತಂತ್ರವಾಗಿ ಇದ್ದವರಿಗೆ ಯಾವುದೇ ಅಸ್ತಿತ್ವ ಇರೋದಿಲ್ಲ, ಇದೆಂತ ದೌರ್ಬಗ್ಯ ಬಂದಿದೆ ಇಂತವರಿಗೆ, ಅವರಿಗೆ ನಾನು ಗೆಲ್ಲಬೇಕು ಎಂಬುದು ಇದೆ, ಯಾರ ಆಧಾರದಿಂದ ಗೊತ್ತಾ? ಮೋದಿ, ಅಮಿತ್ ಷಾ, ಯೋಗಿ ಅವರ ಆಧಾರದಿಂದ ಗೆಲ್ಲಬೇಕು ಅನ್ನೋ ಮನಸ್ಸಿದೆ. ಎಂತ ದೌರ್ಬಗ್ಯ ಬಂದಿದೆ ಇವರಿಗೆ.

    ನೀವು ವಿರೋಧ ಮಾಡ್ತಾ ಇರೋದು ಮೋದಿ, ಅಮಿತ್ ಷಾ, ಯೋಗಿಯನ್ನ, ಬಿಜೆಪಿಯ ನಾಯಕರೇ ಮೋದಿಯವರು, ಯೋಗಿ, ಅಮಿತ್ ಷಾ, ಇವರು ಬಿಜೆಪಿ ಬಿಟ್ರೆ ಮತ್ತೆ ಅಸ್ತಿತ್ವ ಇದ್ಯಾ? ಅವರ ಅಸ್ತಿತ್ವ ಇರೋದೆ ಬಿಜೆಪಿ.

    ಪುತ್ತಿಲರೇ ನಿಮ್ಮ ಅಸ್ತಿತ್ವ ಎಲ್ಲಿ?

    ನೀವೂ ಯೋಚನೆ ಮಾಡ್ಬೇಗಿತ್ತು, ನಾಚಿಕೆ ಅಲ್ವ ಇದು, ನೀವು ಈಗ್ಲೇ ಕೀಳು ಮಟ್ಟದ ರಾಜಕೀಯ ಮಾಡ್ತಾ ಇದ್ದಿರಿ, ಮುಂದೆ ಹೇಗೆ? ಬಿಜೆಪಿಯ ಹಿಂದುತ್ವ ದೊಡ್ಡದಾ, ಸಂಘದ ಹಿಂದುತ್ವ‌ ದೊಡ್ಡದಾ ಅಥವಾ ವ್ಯಕ್ತಿಯ ಹಿಂದುತ್ವ ದೊಡ್ಡದಾ ಅನ್ನೋದನ್ನ ಜನ ತೀರ್ಮಾನಿಸುತ್ತಾರೆ.

    70 ವರ್ಷಗಳಿಂದ ಬಲಿದಾನ ಮಾಡಿ ರಕ್ತವನ್ನ ಚೆಲ್ಲಿ ಕಟ್ಟಿದ ಹಿಂದುತ್ವನಾ…? ಕೇವಲ ಭಾಷಣ ಮಾಡಿದಂತ ಹಿಂದುತ್ವನಾ..? ಯಾವುದು ಹಿಂದುತ್ವ ಅಂತ ಆಗ್ಬೇಕು, ಹಿಂದುತ್ವದ ನಿಜವಾದ ಅರ್ಥದಲ್ಲಿ ಇರೋದು ಬಿಜೆಪಿ ಮಾತ್ರ, ಬಿಜೆಪಿ ಪಕ್ಷಕ್ಕೆ ಬೆಂಬಲ‌ ಮಾಡಿದ್ರೆ ಅದು ಪುಣ್ಯದ ಕೆಲಸ, ಇಲ್ಲಂದ್ರೆ ಪಾಪದ ಕೆಲಸ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply