Connect with us

    BELTHANGADI

    ಬೈಕಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಮೃತಪಟ್ಟ ಸೋದರರು

    ಬೈಕಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಮೃತಪಟ್ಟ ಸೋದರರು

    ಬೆಳ್ತಂಗಡಿ, ಮಾರ್ಚ್ 24 : ಬೈಕಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ  ಸೋದರರಿಬ್ಬರು  ಧಾರುಣವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಗುರಿಪಳ್ಳ ಎಂಬಲ್ಲಿ ಸಂಭವಿಸಿದೆ.

     

    ಗುರಿಪಳ್ಳ ಕನ್ಯಾಡಿ ನಿವಾಸಿಗಳಾಗಿದ್ದ ಸೋದರರು ಹರೀಶ್ (40 ) ಮತ್ತು ಸುಧೀರ್ (38) ಬೈಕಿನಲ್ಲಿ ಮನೆ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಹಿಂದಿನಿಂದ ಢಿಕ್ಕಿ ಹೊಡೆದಿದೆ.

    ಪರಿಣಾಮ ಸೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಬೆಳ್ತಂಗಡಿ  ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು,  ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply