Connect with us

    BANTWAL

    ಕರಾವಳಿಯಲ್ಲಿ ಟ್ರೆಂಡ್ ಆಗಿದೆ ರಾಮ ಭಕ್ತ ಪ್ರಶಾಂತ್ ಭಂಡಾರ್ಕರ್ ವಿಡಿಯೋ

    ಬಂಟ್ವಾಳ : ಬಂಟ್ವಾಳದ ರಾಮ ಭಕ್ತ ಪ್ರಶಾಂತ್ ಭಂಡಾರ್ಕರ್ ಸಧ್ಯ ಕರಾವಳಿಯಲ್ಲಿ ಟ್ರೆಂಡ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಿವಾಸಿ ಪ್ರಶಾಂತ್ ಭಂಡಾರ್ಕರ್ ರಾಮ ಭಕ್ತರಾಗಿದ್ದು, ರಾಮಮಂದಿರ ಶಿಲಾನ್ಯಾಸದವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ವಿಶಿಷ್ಠ ಸಂಕಲ್ಪ ಮಾಡಿದ್ದರು.

    ಒಂದು ವರುಷದಿಂದ ಗಡ್ಡ, ತಲೆಗೂದಲು ಬಿಟ್ಟಿದ್ದರು. ನಿನ್ನೆ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲನ್ಯಾಸ ನೆರವೇರಿದ್ದು, ಶಿಲಾನ್ಯಾಸ ದಿನವೇ ಗಡ್ಡ, ತಲೆಗೂದಲಿಗೆ ಕತ್ತರಿ ಹಾಕಿದ್ದಾರೆ. ನೇತ್ರಾವತಿ ನದಿಯಲ್ಲಿ ಮುಳುಗು ಹಾಕಿದ ಬಳಿಕ ತಮ್ಮ ಗಡ್ಡ, ತಲೆಗೂದಲನ್ನು ಕತ್ತರಿಸಿದ್ದಾರೆ.

    ಶ್ರೀರಾಮ ಭಕ್ತ, ಪ್ರಧಾನಿ ಮೋದಿಯವರ ಅಭಿಮಾನಿಯಾದ ಪ್ರಶಾಂತ್ ಕೂದಲಿಗೆ ಮುಕ್ತಿ ನೀಡಿದ ಬಳಿಕ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲು ಪ್ರಾರ್ಥನೆ ಸಲ್ಲಿಸಿದ್ದಾರೆ.

    ಇನ್ನು ಪ್ರಶಾಂತ್‌ ಭಂಡಾರ್ಕರ್ ಸ್ನೇಹಿತರಿಂದ ಕೂದಲು ಮುಕ್ತಿಯ ವೀಡಿಯೋ ಸೆರೆಯಾಗಿದ್ದು, ಕ್ರಿಯಾತ್ಮಕವಾಗಿ ಮಾಡಿದ ವೀಡಿಯೋ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಸಿನೆಮಾ ಮಾದರಿಯಲ್ಲಿಯೇ ವೀಡಿಯೋ ತಯಾರಿಸಲಾಗಿದೆ. ಬಂಟ್ವಾಳದಲ್ಲಿ ಸರ್ವಿಸ್ ಸ್ಟೇಷನ್ ಹೊಂದಿರುವ ಪ್ರಶಾಂತ್ ಭಂಡಾರ್ಕರ್ ಈ ಹಿಂದೆ ಮೋದಿ ಪ್ರಧಾನಿ ಆಗಲು ಇದೇ ರೀತಿ ಸಂಕಲ್ಪ ಕೈಗೊಂಡಿದ್ದರು

    Share Information
    Advertisement
    Click to comment

    You must be logged in to post a comment Login

    Leave a Reply