LATEST NEWS
ಸಂಸದರ ವರ್ತನೆ ಖಂಡಿಸಿ ಸತ್ಯಾಗ್ರಹಕ್ಕೆ ನಿರ್ಧರಿಸಿದ ಉಪ ಸಭಾಪತಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಸಂಸದರ ವರ್ತನೆ ಖಂಡಿಸಿ ಸತ್ಯಾಗ್ರಹಕ್ಕೆ ನಿರ್ಧರಿಸಿದ ಉಪ ಸಭಾಪತಿ
ನವದೆಹಲಿ, ಸೆಪ್ಟಂಬರ್ 22:ರಾಜ್ಯಸಭೆಯಲ್ಲಿ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ ಸದಸ್ಯರ ವರ್ತನೆಯ ವಿರುದ್ಧ ರಾಜ್ಯ ಸಭಾ ಉಪ ಸಭಾಪತಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೇಂದ್ರ ಸರಕಾರದ ಕೃಷಿ ಮಸೂದೆಯ ಪಾಸ್ ಮಾಡುವ ಸಂದರ್ಭದಲ್ಲಿ ತೃಣಮೂಲ ಕಾಂಗ್ರೇಸ್ ನ ಡೆರಿಕ್ ಒಬ್ರಿನ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಸೇರಿದಂತೆ 8 ರಾಜ್ಯ ಸಭಾ ಸಂಸದರು ಉಪ ಸಭಾಪತಿಯ ಬಳಿ ಬಂದು ದುರ್ವರ್ತನೆ ತೋರಿದ್ದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಅದರಲ್ಲೂ ಟಿ.ಎಂ.ಸಿ ಯ ಡೆರಿಕ್ ಒಬ್ರಿನ್ ಹಾಗೂ ಆಪ್ ನ ಸಂಜಯ್ ಸಿಂಗ್ ಒಂದು ಹಂತದಲ್ಲಿ ಉಪ ಸಭಾಪತಿಯ ಮೇಲೆ ಹಲ್ಲೆಗೂ ಯತ್ನ ನಡೆಸಿದ್ದು, ಸಭಾಪತಿ ಮೇಜಿನ ಮೇಲಿದ್ದ ಮೈಕ್ ಗಳನ್ನು ಕಿತ್ತೆಸೆದು ಹಾನಿ ಮಾಡಿದ್ದರು.
ಸಂಸದರ ಈ ದುರ್ವತನೆಯನ್ನು ತಡೆಯಲು ಬಂದ ಮಾರ್ಷಲ್ ಮೇಲೆ ಸಂಜಯ್ ಸಿಂಗ್ ಹಲ್ಲೆ ನಡೆಸಿದ್ದಲ್ಲದೆ, ಕುತ್ತಿಗೆ ಹಿಡಿದು ದಬ್ಬಿದ್ದರು.
ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದಸ್ಯರ ಈ ವರ್ತನೆಯಿಂದಾಗಿ ಈ ಸಂಸದರ ಮೇಲೆ ಕ್ರಮ ಕೈಗೊಳ್ಳುವಂತೆ ದೇಶದೆಲ್ಲೆಡೆ ಒತ್ತಾಯ ಕೇಳಿ ಬಂದಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಸಭಾ ಸಭಾಪತಿ ವೆಂಕಯ್ಯ ನಾಯ್ಡು 8 ಸಂಸದರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಅಮಾನತು ಆದೇಶದ ವಿರುದ್ಧ 8 ಸಂಸದರು ಸಂಸತ್ತಿನ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಆಹೋರಾತ್ರಿ ಧರಣಿಯನ್ನೂ ನಡೆಸುತ್ತಿದ್ದಾರೆ.
ಈ ನಡುವೆ ಉಪ ಸಭಾಪತಿ ಹರಿವಂಶ್ ಸಿಂಗ್ ಇಂದು ಧರಣಿ ನಿರತ ಸಂಸದರಿಗೆ ಚಹಾ ವಿತರಿಸುವ ಮೂಲಕ ಮಾತುಕತೆಯನ್ನೂ ನಡೆಸಿದ್ದಾರೆ.
ಬಳಿಕದ ಬೆಳವಣಿಗೆಯಲ್ಲಿ ಈ 8 ಸಂಸದರ ವರ್ತನೆಗೆ ಬೇಸತ್ತು ಇದೀಗ ಸ್ವತಹ ಉಪ ರಾಷ್ಟ್ರಪತಿ ಹರಿವಂಶ್ ಸಿಂಗ್ ಒಂದು ದಿನದ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಸದನದಲ್ಲಿ ದುರ್ವರ್ತನೆ ತೋರಿದ ಸಂಸದರಿಗೆ ವಿರೋಧ ಪಕ್ಷಗಳಾದ ಕಾಂಗ್ರೇಸ್, ಕಮ್ಯುನಿಷ್ಟ್ ಸೇರಿದಂತೆ ಎಲ್ಲಾ ಪಕ್ಷಗಳೂ ತಮ್ಮ ಬೆಂಬಲ ಸೂಚಿಸಿವೆ.