LATEST NEWS
ಸಂಸದರ ವರ್ತನೆ ಖಂಡಿಸಿ ಸತ್ಯಾಗ್ರಹಕ್ಕೆ ನಿರ್ಧರಿಸಿದ ಉಪ ಸಭಾಪತಿ
ಸಂಸದರ ವರ್ತನೆ ಖಂಡಿಸಿ ಸತ್ಯಾಗ್ರಹಕ್ಕೆ ನಿರ್ಧರಿಸಿದ ಉಪ ಸಭಾಪತಿ
ನವದೆಹಲಿ, ಸೆಪ್ಟಂಬರ್ 22:ರಾಜ್ಯಸಭೆಯಲ್ಲಿ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ ಸದಸ್ಯರ ವರ್ತನೆಯ ವಿರುದ್ಧ ರಾಜ್ಯ ಸಭಾ ಉಪ ಸಭಾಪತಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೇಂದ್ರ ಸರಕಾರದ ಕೃಷಿ ಮಸೂದೆಯ ಪಾಸ್ ಮಾಡುವ ಸಂದರ್ಭದಲ್ಲಿ ತೃಣಮೂಲ ಕಾಂಗ್ರೇಸ್ ನ ಡೆರಿಕ್ ಒಬ್ರಿನ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಸೇರಿದಂತೆ 8 ರಾಜ್ಯ ಸಭಾ ಸಂಸದರು ಉಪ ಸಭಾಪತಿಯ ಬಳಿ ಬಂದು ದುರ್ವರ್ತನೆ ತೋರಿದ್ದರು.
ಅದರಲ್ಲೂ ಟಿ.ಎಂ.ಸಿ ಯ ಡೆರಿಕ್ ಒಬ್ರಿನ್ ಹಾಗೂ ಆಪ್ ನ ಸಂಜಯ್ ಸಿಂಗ್ ಒಂದು ಹಂತದಲ್ಲಿ ಉಪ ಸಭಾಪತಿಯ ಮೇಲೆ ಹಲ್ಲೆಗೂ ಯತ್ನ ನಡೆಸಿದ್ದು, ಸಭಾಪತಿ ಮೇಜಿನ ಮೇಲಿದ್ದ ಮೈಕ್ ಗಳನ್ನು ಕಿತ್ತೆಸೆದು ಹಾನಿ ಮಾಡಿದ್ದರು.
ಸಂಸದರ ಈ ದುರ್ವತನೆಯನ್ನು ತಡೆಯಲು ಬಂದ ಮಾರ್ಷಲ್ ಮೇಲೆ ಸಂಜಯ್ ಸಿಂಗ್ ಹಲ್ಲೆ ನಡೆಸಿದ್ದಲ್ಲದೆ, ಕುತ್ತಿಗೆ ಹಿಡಿದು ದಬ್ಬಿದ್ದರು.
ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದಸ್ಯರ ಈ ವರ್ತನೆಯಿಂದಾಗಿ ಈ ಸಂಸದರ ಮೇಲೆ ಕ್ರಮ ಕೈಗೊಳ್ಳುವಂತೆ ದೇಶದೆಲ್ಲೆಡೆ ಒತ್ತಾಯ ಕೇಳಿ ಬಂದಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಸಭಾ ಸಭಾಪತಿ ವೆಂಕಯ್ಯ ನಾಯ್ಡು 8 ಸಂಸದರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಅಮಾನತು ಆದೇಶದ ವಿರುದ್ಧ 8 ಸಂಸದರು ಸಂಸತ್ತಿನ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಆಹೋರಾತ್ರಿ ಧರಣಿಯನ್ನೂ ನಡೆಸುತ್ತಿದ್ದಾರೆ.
ಈ ನಡುವೆ ಉಪ ಸಭಾಪತಿ ಹರಿವಂಶ್ ಸಿಂಗ್ ಇಂದು ಧರಣಿ ನಿರತ ಸಂಸದರಿಗೆ ಚಹಾ ವಿತರಿಸುವ ಮೂಲಕ ಮಾತುಕತೆಯನ್ನೂ ನಡೆಸಿದ್ದಾರೆ.
ಬಳಿಕದ ಬೆಳವಣಿಗೆಯಲ್ಲಿ ಈ 8 ಸಂಸದರ ವರ್ತನೆಗೆ ಬೇಸತ್ತು ಇದೀಗ ಸ್ವತಹ ಉಪ ರಾಷ್ಟ್ರಪತಿ ಹರಿವಂಶ್ ಸಿಂಗ್ ಒಂದು ದಿನದ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಸದನದಲ್ಲಿ ದುರ್ವರ್ತನೆ ತೋರಿದ ಸಂಸದರಿಗೆ ವಿರೋಧ ಪಕ್ಷಗಳಾದ ಕಾಂಗ್ರೇಸ್, ಕಮ್ಯುನಿಷ್ಟ್ ಸೇರಿದಂತೆ ಎಲ್ಲಾ ಪಕ್ಷಗಳೂ ತಮ್ಮ ಬೆಂಬಲ ಸೂಚಿಸಿವೆ.
You must be logged in to post a comment Login