LATEST NEWS
ಜೈಪುರ – ಭೀಕರ ರಸ್ತೆ ಅಪಘಾತಕ್ಕೆ ದಿ.ಜಸ್ವಂತ್ ಸಿಂಗ್ ಸೊಸೆ ಸಾವು – ಮಗನ ಸ್ಥಿತಿ ಗಂಭೀರ
ಜೈಪುರ ಜನವರಿ 31 :ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಪಕ್ಕದಲ್ಲಿರುವ ಕಾಲುವೆಗೆ ಡಿಕ್ಕಿ ಹೊಡೆದ ಪರಿಣಾಮ ಮಾಜಿ ಕೇಂದ್ರ ಸಚಿವ ದಿವಂಗತ ಜಸ್ವಂತ್ ಸಿಂಗ್ ಅವರ ಸೊಸೆ ಸಾವನಪ್ಪಿ ಮಗ ಗಂಭೀರವಾಗಿ ಗಾಯಗೊಂಡ ಘಟನೆ ದೆಹಲ್ಲಿ-ಮುಂಬೈ ಹೆದ್ದಾರಿಯಲ್ಲಿ ನಡೆದಿದೆ.
ಕೆಲಸದ ನಿಮಿತ್ತ ಮನ್ವೇಂದ್ರ ಸಿಂಗ್ ದಂಪತಿ ಹಾಗೂ ಮಗ ಕಾರಿನಲ್ಲಿ ದೆಹಲ್ಲಿ-ಮುಂಬೈ ಹೆದ್ದಾರಿ ಮೂಲಕ ಜೈಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಪಕ್ಕದಲ್ಲಿನ ಕಾಲುವೆಗೆ ನಿರ್ಮಿಸಲಾಗಿರುವ ತಡೆ ಗೋಡೆಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಒಳಗಿದ್ದ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಪತ್ನಿ ಚಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯಲ್ಲಿ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಎದೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಇವರ ಮಗ ಹಾಗೂ ಕಾರು ಡ್ರೈವರ್ಗೂ ಗಂಭೀರವಾದ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಅಲ್ವಾರದ ಸೋಲಂಕಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರ ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿಯ ದಿವಂಗತ ಜಸ್ವಂತ್ ಸಿಂಗ್ ಅವರ ಮಗ ಆಗಿರುವ ಮನ್ವೇಂದ್ರ ಸಿಂಗ್ ಅವರು 2018ರಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.
You must be logged in to post a comment Login