LATEST NEWS
ಜುಲೈ 10 ರಿಂದ 16 ರವರೆಗೆ ಉಳ್ಳಾಲ ರೈಲು ನಿಲ್ದಾಣ ಬಳಿಯ ಸೋಮೇಶ್ವರ ರೈಲ್ವೇಗೇಟ್ ಬಂದ್
ಉಳ್ಳಾಲ ಜುಲೈ 09: ರಾಷ್ಟ್ರೀಯ ಹೆದ್ದಾರಿ 66ರಿಂದ ಕೋಟೆಕಾರು ಮಾರ್ಗವಾಗಿ ಸೋಮೇಶ್ವರ ದೇವಸ್ಥಾನ ಸಹಿತ ಉಳ್ಳಾಲ ನಗರ ಪಂಚಾಯತ್ ಅನ್ನು ಸಂಪರ್ಕಿಸುವ ಉಳ್ಳಾಲ ರೈಲು ನಿಲ್ದಾಣ ಬಳಿಯ ಸೋಮೇಶ್ವರ ರೈಲ್ವೇಗೇಟನ್ನು
ಜುಲೈ 10ರ ಬುಧವಾರ ಬೆಳಗ್ಗೆ 10 ಗಂಟೆಯಿಂದ ಜುಲೈ 16ರ ಮಂಗಳವಾರದವರೆಗೆ ತುರ್ತು ಹಳಿ ನಿರ್ವಹಣೆಗಾಗಿ ಮುಚ್ಚಲಾಗುತ್ತದೆ ಎಂದು ದಕ್ಷಿಣ ರೈಲ್ವೇಯ ಸೆಕ್ಷನ್ ಎಂಜಿನಿಯರಿಂಗ್ ವಿಭಾಗದ ಪ್ರಕಟನೆ ತಿಳಿಸಿದೆ.
You must be logged in to post a comment Login