Connect with us

    LATEST NEWS

    ಮೀನು ಮಟ್ಟಿದ್ದೇನೆ ದೇವಸ್ಥಾನದ ಒಳಗೆ ಬರುವುದಿಲ್ಲ ಎಂದ್ರು ರಾಹುಲ್ ಗಾಂಧಿ

    ಉಡುಪಿ ಎಪ್ರಿಲ್ 27 : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ಇಂದು ಕಾಪುವಿನಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗಿಯಾದರು. ಈ ವೇಳೆ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು.


    ಕಾರ್ಯಕ್ರಮದ ಬಳಿಕ ಕಾಂಗ್ರೇಸ್ ಮುಖಂಡರು ರಾಹುಲ್ ಗಾಂಧಿಯನ್ನು ಪಕ್ಕದಲ್ಲೇ ಇರುವ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಈ ವೇಳೆ ಸ್ಥಳೀಯ ಮುಖಂಡರು ದೇವಸ್ಥಾನದ ಒಳಗೆ ಬರುವಂತೆ ಮನವಿ ಮಾಡಿದಾಗ ಮೀನು ಮುಟ್ಟಿದ್ದೇನೆ ದೇವಸ್ಥಾನದ ಒಳಗೆ ಬರುವುದಿಲ್ಲ ಎಂದು ತಿಳಿಸಿದರು. ಬಳಿಕ ದೇಗುಲದ ಪ್ರಾಂಗಣದಲ್ಲಿಯೇ ಅರ್ಚಕರು ರಾಹುಲ್ ಗಾಂಧಿ ಅವರನ್ನು ಗೌರವಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply