Connect with us

    LATEST NEWS

    ಪಾಳು ಬಾವಿಯಲ್ಲಿ ಸಿಲುಕಿದ ನಾಲ್ಕು ಹೆಬ್ಬಾವುಗಳ ರಕ್ಷಣೆ…!!

    ಮಂಗಳೂರು ಜನವರಿ 31: ಮೇಟಿಂಗ್ ಗೆ ಬಂದ ನಾಲ್ಕು ಹೆಬ್ಬಾವುಗಳು ಪಾಳುಬಾವಿಯಲ್ಲಿ ಸಿಲುಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಕೊಟ್ಟಾರ ಎಂಬಲ್ಲಿ ನಡೆದಿದೆ. ಜ. 29 ರಂದು ಹೆಬ್ಬಾವುಗಳು ಪಾಳುಬಾವಿಯಿಂದ ಹೊರ ಬರಲಾಗದೆ ಪರದಾಡುತ್ತಿದ್ದ ದೃಶ್ಯವನ್ನು ನೋಡಿದ ನೇಚರ್ ಲವರ್ಸ್ ತಂಡ ಸದಸ್ಯ ತನ್ನ ಸಹಪಾಠಿಗಳಲ್ಲಿ ಈ ವಿಚಾರ ತಿಳಿಸಿದ ಹಿನ್ನಲೆಯಲ್ಲಿ ಇದೀಗ ಎಲ್ಲಾ ನಾಲ್ಕು ಹೆಬ್ಬಾವುಗಳನ್ನು ರಕ್ಷಿಸಿ ಹತ್ತಿರದ ಅರಣ್ಯಕ್ಕೆ ಬಿಡಲಾಗಿದೆ.


    ಮಂಗಳೂರು ನಗರ ಮಧ್ಯೆ ಇರುವ ಕೊಟ್ಟಾರ ಸುಮಾರು 15 ಅಡಿ ಆಳಕ್ಕೆ ಬೃಹತ್ ಗಾತ್ರದ ಹೆಣ್ಣು ಹೆಬ್ಬಾವೊಂದು ಇಳಿದಿದೆ. ಹಾವುಗಳ ಮೇಟಿಂಗ್ ಸೀಸನ್ ಆಗಿರುವ ಕಾರಣ, ಹೆಣ್ಣಿನ ವಾಸನೆ ಹಿಡಿದ ಮೂರು ಗಂಡು ಹೆಬ್ಬಾವುಗಳು ಕೂಡಾ ಪಾಳುಬಾವಿಗೆ ಇಳಿದಿದೆ.

    ಆದರೆ ಬಾವಿಗೆ ಇಳಿದ ಹೆಬ್ಬಾವುಗಳಿಗೆ ಬಳಿಕ ಮೇಲೆ ಹತ್ತಲು ಸಾಧ್ಯವಾಗದೆ, ಬಾವಿಯೊಳಗೆಯೇ ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು. ಪಾಳುಬಾವಿ ಇರುವಂತ ಜಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹೆಬ್ಬಾವುಗಳು ಪಾಳುಬಾವಿಯಲ್ಲಿ ಬಿದ್ದಿರುವ ವಿಚಾರವನ್ನು ನೇಚರ್ ಲವರ್ಸ್ ತಂಡದ ಭುವನ್ ಅವರ ಗಮನಕ್ಕೆ ತಂದಿತ್ತಾರೆ. ಭುವನ್ ತಂಡದ ಅನುಭವಿ ಅಜಯ್ ಅವರ ಬಳಿ ಹೆಬ್ಬಾವುಗಳ ವಿಚಾರವನ್ನು ತಿಳಿಸಿದ ಹಿನ್ನಲೆಯಲ್ಲಿ ಅಜಯ್ ಅವರ ತಂಡ ಸತತ ಮೂರು ಗಂಟೆಗಳ ಕಾಲ ಬಾವಿಯೊಳಗೆ ಇಳಿದು ನಾಲ್ಕೂ ಹೆಬ್ಬಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ಮೂಲಕ ಸಮೀಪದ ಕಾಡಿನಲ್ಲಿ ಬಿಟ್ಟಿದ್ದಾರೆ. ಗುಂಪಿನಲ್ಲಿದ್ದ ನಾಲ್ಕು ಹಾವುಗಳಲ್ಲಿ ಹೆಣ್ಣು ಹೆಬ್ಬಾವು 8 ರಿಂದ 9 ಅಡಿ ಉದ್ದವಿದ್ದು, ಇಳಿದ ಹಾವುಗಳೂ 8 ಅಡಿ ಉದ್ದವಿತ್ತು. ಏಣಿ ಮೂಲಕ ಬಾವಿಗಿಳಿದ ಹಾವು ರಕ್ಷಕರ ತಂಡ ಒಂದೊಂದೇ ಹಾವುಗಳನ್ನು ಗೋಣಿ ಚೀಲಗಳಲ್ಲಿ ಹಾಕಿ ಹಗ್ಗದ ಸಹಾಯದಲ್ಲಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply