DAKSHINA KANNADA
ಪುತ್ತೂರು : ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿ ಹೆಡೆ ಬಿಚ್ಚಿದ ಮರಿ ನಾಗರಾಜ.!!
ಪುತ್ತೂರು ಅಕ್ಟೋಬರ್ 25:
ಪುತ್ತೂರು : ತರಗತಿ ನಡೆಯುತ್ತಿದ್ದಾಗಲೇ ಕ್ಲಾಸ್ ರೂಂಗೆ ನುಗ್ಗಿದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಕ್ಲಾಸ್ ರೂಂನಲ್ಲಿ ವಿದ್ಯಾಭ್ಯಾಸದಲ್ಲಿ ಮಗ್ನ ವಾಗಿರುವ ಸಂದರ್ಭ ಏಕಾಏಕಿ ನಾಗರಹಾವಿನ ಮರಿಯೊಂದು ಕ್ಲಾಸ್ ರೂಂ ಗೆ ಎಂಟ್ರಿ ಕೊಟ್ಟಿದೆ. ನಾಗರ ಹಾವನ್ನು ಕಂಡು ವಿದ್ಯಾರ್ಥಿಗಳು ಒಮ್ಮೆಲೆ ಹೌಹಾರಿದ್ದಾರೆ. ಬಳಿಕ ಉರಗ ತಜ್ಞರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ತೇಜಸ್ ನಾಗರಹಾವಿನ ಮರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
You must be logged in to post a comment Login