Connect with us

    DAKSHINA KANNADA

    ಆಡಳಿತ ಪಕ್ಷದವರಂತೆ ವರ್ತಿಸಬೇಡಿ ನಿಮ್ಮ ವಿರುದ್ಧವೂ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಬಹುದು – ಶಾಸಕ ಅಶೋಕ್ ಕುಮಾರ್ ರೈ ಗೆ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

    ಪುತ್ತೂರು ಮಾರ್ಚ್ 06: ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಮತ್ತು ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಖಂಡಿಸಿ ಭಯೋತ್ಪಾದನಾ ವಿರೋಧಿ ಸಮಿತಿಯಿಂದ ಪುತ್ತೂರಿನ ದರ್ಬೆ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.


    ಈ ವೇಳೆ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ ಮುಖಂಡ ಅನಿಲ್ ಕುಮಾರ್ ದಡ್ಡು ಪುತ್ತೂರು ಶಾಸಕರಿಗೆ ಎಚ್ಚರಿಕೆ ನೀಡಿದರು. ನೀವು ಬಹುಸಂಖ್ಯಾತ ಸಮುದಾಯದ ಮತ ಪಡೆದು ಶಾಸಕರಾಗಿ ಆಯ್ಕೆಯಾದವರು, ರಾಜ್ಯವಾಳುವ ಆಡಳಿತ ಪಕ್ಷದವರಂತೆ ವರ್ತನೆ ಮಾಡಬೇಡಿ. ಬೆಳಿಗ್ಗೆ ಎದ್ದ ಕೂಡಲೇ ದೇವಸ್ಥಾನಗಳಿಗೆ ಭೇಟಿ ನೀಡುವವರು ನೀವು, ಅದರೆ ಅದೇ ದೇವರನ್ನು ಆರಾಧನೆ ಮಾಡುವವರ ಮೇಲೆ ದೌರ್ಜನ್ಯವಾಗುತ್ತಿದೆ, ಈ ಬಗ್ಗೆ ನೀವು ಒಂದು ಮಾತನ್ನೂ ಆಡುತ್ತಿಲ್ಲ, ಖಂಡನೆಯನ್ನೂ ಕೊಡುತ್ತಿಲ್ಲ . ಹೀಗೆ ವರ್ತನೆ ತೋರಿದಲ್ಲಿ ನಿಮ್ಮ ವಿರುದ್ಧವೂ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಎಚ್ಚರಿಕೆ ನೀಡಿದರು.


    ಪ್ರತಿಭಟನೆಯ ಹಂತವಾಗಿ ರಸ್ತೆ ಮಧ್ಯೆ ಕುಳಿತು ರಸ್ತೆ ತಡೆ ನಡೆಸಲು ಮುಂದಾದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಎಬ್ಬಿಸಲು ಮುಂದಾದಾಗ ಪೋಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು. ಈ ವೇಳೆ ಹಿರಿಯ ಮುಖಂಡರು ಮಧ್ಯಪ್ರವೇಶಿಸಿತ ಪರಿಸ್ಥಿತಿ ತಿಳಿಗೊಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply