Connect with us

    DAKSHINA KANNADA

    ಪುತ್ತೂರಿನಲ್ಲಿ ನಿಲ್ಲದ ಅನುದಾನದ ವಾರ್ – ಶಾಸಕ ಅಶೋಕ್ ರೈ ವಿರುದ್ದ ಬಿಜೆಪಿ ಗರಂ

    ಪುತ್ತೂರು ಮಾರ್ಚ್ 21: ಪುತ್ತೂರಿನಲ್ಲಿ ಸದ್ಯ ಅನುದಾನ ಕುರಿತಂತೆ ನಡೆಯುತ್ತಿರುವ ವಾರ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದೀಗ ಪುತ್ತೂರು ಶಾಸಕ ಅಶೋಕ್ ರೈ ವಿರುದ್ದ ಮಾಜಿ ಶಾಸಕ ಸಂಜೀವ ಮಠಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಪುತ್ತೂರಿನಲ್ಲಿ ಮಾತನಾಡಿದ ಅವರು ಶಾಸಕನಾಗಿದ್ದಾನ ನಾನು ತಂದ ಅನುದಾನಗಳನ್ನು ನನ್ನದೆಂದು ಶಾಸಕ ಅಶೋಕ್ ಕುಮಾರ್ ರೈ ಬಿಂಬಿಸುತ್ತಿದ್ದಾರೆ. ಅದಲ್ಲದೆ ಸುಳ್ಳು ದಾಖಲೆಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಗೂಂಡಾಗಿರಿ ಪ್ರದರ್ಶನ ನಡೆಸಲು ಶಾಸಕರು ತಮ್ಮ ಬೆಂಬಲಿಗರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.

    ಕಾಂಗ್ರೇಸ್ ಶಾಸಕ ತಾನು ಶಾಸಕನಾದ ಒಂದು ವರ್ಷದಲ್ಲಿ ಪುತ್ತೂರಿಗೆ 1400 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ತಿರುಗುತ್ತಿದ್ದಾರೆ, ಆದರೆ ಎಲ್ಲಾ ಅನುದಾನಗಳೂ ಕೇಂದ್ರ ಸರಕಾರದ್ದಾಗಿದೆ. ಎಲ್ಲಾ ಅನುದಾನಗಳೂ ಬಿಜೆಪಿ ಸರಕಾರವೇ ಬಿಡುಗಡೆ ಮಾಡಿರುವುದಾಗಿದೆ ಎಂದು ದಾಖಲೆಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply