Connect with us

LATEST NEWS

ನಾನು ಪಕ್ಷಾಂತರ ಮಾಡುತ್ತಿಲ್ಲ – ಪ್ರಮೋದ್ ಮಧ್ವರಾಜ್

ನಾನು ಪಕ್ಷಾಂತರ ಮಾಡುತ್ತಿಲ್ಲ – ಪ್ರಮೋದ್ ಮಧ್ವರಾಜ್

ಉಡುಪಿ ಅಕ್ಟೋಬರ್ 17: ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರ ಪೋಟೋ ಒಂದು ವೈರಲ್ ಆಗಿದ್ದು, ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಎಂದು ವದಂತಿ ಹಬ್ಬಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರಮೋದ್ ಮಧ್ವರಾಜ್, ನಾನು ಬಿಜೆಪಿಗೆ ಸೇರ್ಪಡೆ ವದಂತಿ ಸುಳ್ಳು, ನಾನು ಯಾವುದೇ ಪಕ್ಷಾಂತರ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಐಬಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಭೇಟಿ ಮಾಡಿದ್ದು ನಿಜ ಆದರೆ ಅವರನ್ನು ಭೇಟಿ ಮಾಡಲು ಐಬಿಗೆ ಹೋಗಿಲ್ಲ. ನಾನು ಅಲ್ಲಿ ಹೋದಾಗ ಅಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಇದ್ದರು, ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಮಂತ್ರಿಯವರನ್ನು ಮಾತನಾಡಿಸುವುದು ಜಿಲ್ಲಾ ಉಸ್ತುವಾರಿ ಸಚಿವನಾಗಿ ನನ್ನ ಕರ್ತವ್ಯ. ಅಲ್ಲದೆ ಆ ಸಂದರ್ಭದಲ್ಲಿ ಅನಂತ್ ಕುಮಾರ್ ಅವರೊಬ್ಬರೆ ಅಲ್ಲದೆ ಇತರ ಬಿಜೆಪಿ ಮುಖಂಡರು ಸ್ಥಳದಲ್ಲಿದ್ದರು ಎಂದು ತಿಳಿಸಿದರು.

ಸೌಜನ್ಯಕ್ಕಾಗಿ ಭೇಟಿ ಮಾಡಿದ್ದು ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು, ನಾನು ಈವರೆಗೆ ಅಮಿತ್ ಶಾ ಅವರನ್ನು ನೋಡಿಯೂ ಇಲ್ಲ, ಅವರ ಭೇಟಿ ಕೂಡ ಸುಳ್ಳು ಸುದ್ದಿ ಎಂದು ಅವರು ಹೇಳಿದ ಅವರು ನಾನು ಬಿಜೆಪಿ ಸೇರ್ಪಡೆ ಬಗ್ಗೆ ಮಾಧ್ಯಮಗಳಲ್ಲಿ ಸ್ಪಷ್ಟೀಕರಣ ನೀಡಿದ್ದರೂ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *