Connect with us

    KARNATAKA

    ಬೆತ್ತಲೆಯಾದ ಚಕ್ರವರ್ತಿ….ಪ್ರಕಾಶ್ ರೈ ಟ್ವೀಟ್ ವೈರಲ್…!!

    ಬೆಂಗಳೂರು ಮೇ 14: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಭರ್ಜರಿ ಗೆಲವು ಸಾಧಿಸಿ ಬಳಿಕ ಇದೀಗ ನಟ ಪ್ರಕಾಶ್ ರೈ ಮಾಡಿರುವ ಟ್ವೀಟ್ ಒಂದು ವೈರಲ್ ಆಗಿದೆ.


    ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್​, ಅಮಿತ್​ ಶಾ ಅವರನ್ನು ವ್ಯಂಗ್ಯಮಾಡುವ ರೀತಿಯ ಫೋಟೋ ಹಂಚಿಕೊಂಡಿದ್ದಾರೆ ಪ್ರಕಾಶ್ ರಾಜ್​. ಅವರ ಟ್ವೀಟ್​ ವೈರಲ್​ ಆಗಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಪ್ರಕಾಶ್ ರಾಜ್​ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ದ್ವೇಷ ಮತ್ತು ಧರ್ಮಾಂಧತೆಯನ್ನು ಒದ್ದೋಡಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು. ಬೆತ್ತಲೆಯಾದ ಚಕ್ರವರ್ತಿ’ ಎಂದು ಪ್ರಕಾಶ್​ ರಾಜ್​ ಅವರು ಟ್ವೀಟ್​ ಮಾಡಿದ್ದಾರೆ. ಈ ಬರಹದೊಂದಿಗೆ ಅವರು ಎಂದಿನಂತೆ ಜಸ್ಟ್​ ಆಸ್ಕಿಂಗ್​ ಎಂಬ ಹ್ಯಾಷ್​ಟ್ಯಾಗ್​ ಬಳಸಿದ್ದಾರೆ.​
    ಕರ್ನಾಟಕದಲ್ಲಿ ಬಿಜೆಪಿ ಸೋಲಲಿದೆ ಎಂದು ಪ್ರಕಾಶ್​ ರಾಜ್​ ಅವರು ಮೊದಲೇ ಊಹಿಸಿದ್ದರು. ನರೇಂದ್ರ ಮೋದಿ ನಡೆಸಿದ್ದ ರೋಡ್​ ಶೋ ಅನ್ನು ಟೀಕಿಸಿ ಅವರು ಟ್ವೀಟ್​ ಮಾಡಿದ್ದರು. ಕಿಚ್ಚ ಸುದೀಪ್​ ಅವರು ಬಿಜೆಪಿಗೆ ಬೆಂಬಲ ಸೂಚಿಸಿದಾಗಲೂ ಪ್ರಕಾಶ್ ರಾಜ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದೆ. ಈ ಕುರಿತು ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply