Connect with us

    DAKSHINA KANNADA

    ಪೂಂಜಾಲಕಟ್ಟೆ ಅಪಘಾತ – ಪಿಕಪ್ ಚಾಲಕ ಸಾಹಿಲ್ ನಿಧನ

    ಬಂಟ್ವಾಳ ಅಕ್ಟೋಬರ್ 18: ಲಾರಿ ಮತ್ತು ಪಿಕಪ್ ವಾಹನಗಳ ನಡುವೆ ನಿನ್ನೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಕಪ್ ವಾಹನ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.


    ಅಪಘಾತದಲ್ಲಿ ಪಾಂಡವರಕಲ್ಲು ನಿವಾಸಿ ಪಿಕಪ್ ವಾಹನ‌ ಚಾಲಕ ಸಾಹಿಲ್ ಮೃತ ದುರ್ದೈವಿ. ಈತನ ಜೊತೆಯಲ್ಲಿದ್ದ ಅವಿನಾಶ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ.

    ಇತ್ತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲಾರಿ ಚಾಲಕನೂ ಅಪಾಯದಿಂದ ಪಾರಾಗಿದ್ದಾನೆ. ಪುಂಜಾಲಕಟ್ಟೆ ಪ್ರಗತಿ ಆಸ್ಪತ್ರೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಮಂಗಳೂರು ಕಡೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಲಾರಿ ಪುಂಜಾಲಕಟ್ಟೆ ಯಿಂದ ವಗ್ಗ ಕಡೆಗೆ ಹೋಗುವ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ವಾಹನದ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹರಡಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply