Connect with us

    KARNATAKA

    ದೂರಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೋಳಿಯ ರಾಸಲೀಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಿಡಿ ಲೇಡಿ

    ಬೆಂಗಳೂರು ಮಾರ್ಚ್ 26: ಮಾಜಿ ಸಚಿವ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಈಗ ರೋಚಕ ಹಂತ ತಲುಪಿದ್ದು, 24 ದಿನಗಳ ಬಳಿಕ ಸಿಡಿ ಪ್ರಕರಣದ ಯುವತಿ ತನ್ನ ವಕೀಲರ ಮೂಲಕ ಪೊಲೀಸ್​ ಕಮಿಷನರ್​ ಕಚೇರಿಗೆ ದೂರಿನ ಪ್ರತಿ ಕಳಿಸಿದ್ದಾಳೆ. ದೂರಿನ ಪ್ರತಿಯಲ್ಲಿ ರಮೇಶ್ ಜಾರಕಿಹೋಳಿಯ ರಾಸಲೀಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.


    ಕಿರುಚಿತ್ರ ನಿರ್ಮಿಸುವ ಸಲುವಾಗಿ ರಮೇಶ್​ಜಾರಕಿಹೊಳಿ ಅವರನ್ನ ಭೇಟಿಯಾಗಿದೆ. ಆಗ ನನ್ನ ಮೊಬೈಲ್​ ನಂಬರ್​ ಪಡೆದ ಅವರು ಒಮ್ಮೆ ಕರೆ ಮಾಡಿ ಸಲುಗೆಯಿಂದ ಮಾತನಾಡಿಸಿದರು. ದೊಡ್ಡ ವ್ಯಕ್ತಿ, ಮಿನಿಸ್ಟರ್​ ನನ್ನನ್ನು ಆಪ್ತವಾಗಿ ಮಾತನಾಡಿಸಿದ ಖುಷಿಯಲ್ಲಿ ನಾನು ಅವರನ್ನ ನಂಬಿದೆ. ಅಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವೆ, ಆದರೆ ನೀನು ನನಗೆ ಎಲ್ಲ ರೀತಿಯಲ್ಲೂ ಸಹಕರಿಸು ಎಂದರು. ಕೆಲಸ ಕೊಡಿಸುತ್ತಾರೆ ಎಂಬ ಭರವಸೆಯಲ್ಲಿ ನಾನು ಒಪ್ಪಿದೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿದ್ದೇನೆ ಎಂದು ನನ್ನ ಮೊಬೈಲ್​ಗೆ ವಿಡಿಯೋ ಕರೆ ಮಾಡಿದ ರಮೇಶ್​ ಜಾರಕಿಹೊಳಿ, ನನ್ನೊಂದಿಗೆ ಲೈಂಗಿಕವಾಗಿ ಮಾತನಾಡಿದರು. ಅಲ್ಲದೆ ಅವರು ಹೇಳಿದಂತೆ ನಾನು ನನ್ನ ದೇಹವನ್ನು ಅವರಿಗೆ ನಗ್ನವಾಗಿ ತೋರಿಸಿದೆ ಎಂದು ದೂರಿನಲ್ಲಿ ಯುವತಿ ಬರೆದಿದ್ದಾಳೆ.


    ಅಲ್ಲದೆ ಬೆಂಗಳೂರಿಗೆ ಬಂದ ರಮೇಶ್​ ಜಾರಕಿಹೊಳಿ ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡು ಏನೆಲ್ಲ ಮಾಡಿದರು, ಎಲ್ಲವೂ ಮುಗಿದ ಮೇಲೆ ಕೊನೆಗೆ ಏನಾಯ್ತು ಎಂಬುದನ್ನೂ ಆಕೆ ಈ ದೂರಿನ ಪ್ರತಿಯಲ್ಲಿ ವಿವರಿಸಿದ್ದಾರೆ. ಯುವತಿಯನ್ನು ಬಳಿಸಿದ ನಂತರ ರಮೇಶ್ ಜಾರಕಿಹೋಳಿ ಕೆಲಸ ಕೊಡಲು ಆಗಲ್ಲ. ಬೇಕಾದರೆ ಹಣ ನೀಡುತ್ತೇನೆ ಎಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply