Connect with us

KARNATAKA

“ನಿನಗೆ ಏನು ಉರಿಯುತ್ತೆ” ಎಂದ ಕಮೆಂಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ ವಿರುದ್ದ ದೂರು…!1

Share Information

ಶಿವಮೊಗ್ಗ ಅಗಸ್ಟ್ 25 : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೇ್ಸ್ ನ ಕಾರ್ಯಕರ್ತೆಯೊಬ್ಬರಿಗೆ ನಿಂದನಾತ್ಮಕ ಕಾಮೆಂಟ್ ಮಾಡಿದ ಸಾಮಾಜಿಕ ಕಾರ್ಯಕರ್ತರ ಚಕ್ರವರ್ತಿ ಸೂಲಿಬೆಲೆ ವಿರುದ್ದ ಶಿವಮೊಗ್ಗ ವಿನೋಬಾನಗರದಲ್ಲಿ ದೂರು ನೀಡಿದ್ದಾರೆ.

ಚಂದ್ರಯಾನ ಯಶಸ್ಸಿಗೆ ಪೂಜೆ ಮಾಡಿಸಿ ಫೊಟೋ ಹಾಕಿ ಎಂದು ಪೋಸ್ಟ್ ಹಾಕಿದ್ದ ಸೂಲಿಬೆಲೆಗೆ ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷೆ, ಶಿವಮೊಗ್ಗ ನಿವಾಸಿ ಸೌಗಂಧಿಕ ರಘುನಾಥ್ ಅವರು ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ. ಆದರೆ ಫೊಟೋ ಹಾಕಿ ಅಂತ ಹೇಳಿರುವುದು ಸರಿಯಲ್ಲ, ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಹಾಕಿದ್ದೆ. ದೇವರಿಗೆ ಪೂಜೆ ಮಾಡುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ ಆದರೆ ತೋರ್ಪಡಿಕೆ ಫೊಟೋ ಹಾಕಿ ಎಂದು ಕಮೆಂಟ್ ಮಾಡಿದ್ದರು. ಈ ಕಮೆಂಟ್ ಗೆ ಸ್ವತಃ ಸೂಲಿಬೆಲೆ ಕಮೆಂಟ್ ಮಾಡಿ, “ನಿನಗೆ ಏನು ಉರಿಯುತ್ತೆ” ಎಂದು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರಿುವ ಸೌಗಂಧಿಕ ಅವರು ಹೆಣ್ಣು ನಿಂದನೆ ಅಸಭ್ಯ ಕಮೆಂಟ್ ಗೆ ನಾನೂ ಪ್ರತಿಕ್ರಿಯೆ ಮಾಡಿ, ಸೂಲಿಬೆಲೆ ದೊಡ್ಡ ಭಾಷಕಾರನಾಗಿ, ಮಾತೃ ಪ್ರೀತಿಯಿಂದಲೂ ಬೆಳೆದು ಉರಿಯುತ್ತಾ ಎಂದು ಕಮೆಂಟ್ ಹಾಕಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ. ಸುಳ್ಳು ಭಾಷಣ ಮಾಡಿ, ಜನರನ್ನು ಧರ್ಮದ ಹೆಸರಲ್ಲಿ ದಿಕ್ಕು ತಪ್ಪಿಸುವುದನ್ನ ಬಿಡಬೇಕು ಎಂದು ಆಗ್ರಹಿಸಿದರು.


ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಬೇಕು. ಅವರು ಆ ಕಮೆಂಟ್ ಡಿಲೀಟ್ ಮಾಡಿದ ಮೇಲೆ ಫೇಕ್ ಅಕೌಂಟ್ ಮೂಲಕ ಸ್ಕ್ರೀನ್ ಶಾಟ್ ಬಳಸಿ ತೇಜೋವಧೆ ಮಾಡಿಸಿದ್ದಾರೆ. ಮಾಡಿದ್ದನ್ನ ಒಪ್ಪಿಕೊಳ್ಳುವ ದೊಡ್ಡಗುಣ ಸೂಲಿಬೆಲೆಗೆ ಇಲ್ಲ. ಇಂತಹ ಸ್ತ್ರೀ ನಿಂದಕ ಸೂಲಿಬೆಲೆ ಮಾತುಗಳನ್ನ ಜನ ನಂಬುವುದು ನಾಚಿಗೆಗೇಡಿನ ವಿಷಯ. ಹಾಗಾಗಿ ಸೂಲಿಬೆಲೆ ವಿರುದ್ಧ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ ಎಂದು ಸೌಗಂಧಿಕ ರಘುನಾಥ್ ಹೇಳಿದರು.


Share Information
Advertisement
Click to comment

You must be logged in to post a comment Login

Leave a Reply