Connect with us

    LATEST NEWS

    ಮಂಗಳೂರು – ಜಿಲ್ಲಾ ಕಾರಾಗೃಹಕ್ಕೆ ಭಾರೀ ಸಂಖ್ಯೆಯ ಪೊಲೀಸರಿಂದ ದಾಳಿ

    ಮಂಗಳೂರು ಎಪ್ರಿಲ್ 2 : ಮಂಗಳೂರು ನಗರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ಕಮೀಷನ್ ಕುಲದೀಪ್ ಜೈನ್ ನೇತೃತ್ವದಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.


    ಚುನಾವಣೆ ಹಿನ್ನಲೆ ಈ ವಿಶೇಷ ತಪಾಸಣೆ ನಡೆಸಲಾಗಿದ್ದು, ನಗರ ಕಮಿಷನರೇಟ್ ವ್ಯಾಪ್ತಿಯ ಡಿ.ಸಿ.ಪಿ, ಎ.ಸಿ.ಪಿ, ಇನ್ಸ್ ಪೆಕ್ಟರ್, ಪಿ.ಎಸ್.ಐ ಸೇರಿದಂತೆ 180 ಕ್ಕೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.


    ಜೈಲಿನಲ್ಲಿ ಒಂದೂವರೆ ಗಂಟೆ ಕಾಲ ತಪಾಸಣೆ ನಡೆಸಿದ್ದು ಕೈದಿಗಳ ಸೆಲ್ ಒಳಗಡೆಯೂ ತಪಾಸಣೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಹೊರಬಂದ ಕಮಿಷನರ್ ಕುಲದೀಪ್ ಜೈನ್, ಈ ರೀತಿ ತಪಾಸಣೆ ಪ್ರತಿ ಬಾರಿ ನಡೆಸಲಾಗುವುದು. ಕೈದಿಗಳ ಬಳಿ ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಾ ಪತ್ತೆಯಾಗಿದೆ.‌ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದು ಈ ರೀತಿಯ ಮಾದಕ ವಸ್ತುಗಳು ಹೇಗೆ ಕೈದಿಗಳಿಗೆ ಸಿಗುತ್ತದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply