BELTHANGADI
ಬುದ್ದಿ ಹೇಳಿದ್ದ ತಂದೆಯನ್ನು ಕೊಲೆಗೈದ ಮಗ ಆರೆಸ್ಟ್
ಬೆಳ್ತಂಗಡಿ ಅಗಸ್ಟ್ 27: ಬುದ್ದಿ ಮಾತು ಹೇಳಿದ್ದಕ್ಕೆ ತಂದೆಯನ್ನೇ ಕೊಲೆಗೈದ ಪಾಪಿ ಮಗನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುತ್ಯಾರು ರಸ್ತೆ ನಿವಾಸಿ ವಾಸು ಸಪಲ್ಯ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದು ನಂತರ ತಲೆಮರೆಸಿಕೊಂಡಿದ್ದ ಮಗ ದಯಾನಂದನ್ನು (32) ಪೊಲೀಸರು ಮಂಗಳೂರಿನ ಸ್ಟೆಟ್ ಬ್ಯಾಂಕ್ ಬಳಿ ಬಂಧಿಸಿದ್ದಾರೆ.
ಅಗಸ್ಟ್ 24 ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ಆರೋಪಿ ದಯಾನಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆಮಾಡಿ, ಬಳಿಕ ತಲೆ ಮರೆಸಿಕೊಂಡಿದ್ದು, ಈ ಹಿನ್ನೆಲೆ ಈ ಕೊಲೆಯನ್ನು ಆತನೆ ನಡೆಸಿರಬಹುದದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ತಂದೆಯನ್ನು ಕೊಲೆ ಮಾಡಿದ ತಲೆಮರೆಸಿಕೊಂಡಿದ್ದ ದಯಾನಂದ ಮಂಗಳೂರಿನಲ್ಲಿ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಆ.26 ರಂದು ರಾತ್ರಿ ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದು ಕರೆತಂದಿದ್ದಾರೆ. ತಂದೆ ತನ್ನನ್ನು ಬೈದಿರುವುದಕ್ಕೆ ಕೊಲೆ ನಡೆಸಿರುವುದಾಗಿ ಎಂಬುದಾಗಿ ದಯಾನಂದ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
You must be logged in to post a comment Login