Connect with us

    DAKSHINA KANNADA

    ದ.ಕ ಜಿಲ್ಲಾಧಿಕಾರಿಯ ಮೈ ನೇವರಿಸಿ ಅಭಯ ನೀಡಿದ ದೈವ..!

    ಮಂಗಳೂರು ಫೆಬ್ರವರಿ 07:  ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಾಮಾನ್ಯ ಭಕ್ತರಂತೆ ಕುಡುಂಬೂರಿನ ದೈವಗಳ ನೇಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ದೈವ ಜಿಲ್ಲಾಧಿಕಾರಿ ಯ ಮೈ ನೇವರಿಸಿದ ಆಶೀರ್ವದಿಸಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಬೈಕಂಪಾಡಿ ಕೈಗಾರಿಕಾ ವಲಯದ  ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಮತ್ತು ಸಪರಿವಾರ ದೈವಗಳ ದೈವಸ್ಥಾನದ ನೇಮೋತ್ಸವಕ್ಕೆ  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ‌ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿದರು.  ದೈವಾರಾಧನೆ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಸಾಮಾನ್ಯ ಭಕ್ತರಂತೆ ದೈವದ ನೇಮದಲ್ಲಿ ಭಾಗಿಯಾದರು.


    ದೈವಾರಾಧನೆಯ ಪ್ರತಿ ಹಂತದ ಬಗ್ಗೆ ತುಳು ವಿದ್ವಾಂಸ ದಯಾನಂದ ಕತ್ತಲೆಸಾರ್ ಬಳಿ ಜಿಲ್ಲಾಧಿಕಾರಿಯವರು ಮಾಹಿತಿ ಪಡೆದುಕೊಂಡರು. ಈ ವೇಳೆ ದೈವ ಡಿಸಿ ಅವರ ಮೈ ನೇವರಿಸಿದ ಆಶೀರ್ವದಿಸಿದೆ. ಈ ಸಂದರ್ಭದಲ್ಲಿ ಡಿ.ಮಣಿಯವರು, ಸೇವಾ ಭಾರತಿ ಟ್ರಸ್ಟ್ ನ ರಾಜ್ಯ ದಕ್ಷಿಣ ಪ್ರಾಂತ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಚೆನ್ನಯ್ಯ ಸ್ವಾಮಿ ‌ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಆಗಮಿಸಿದ್ದರು.  ಇವರನ್ನು ನಡುಗಿರಿ ಜಾರಂದಾಯ ದೈವಸ್ಥಾನದ ಆಡಳಿತ ಸಮಿತಿ ಮತ್ತು ‍ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply