Connect with us

    LATEST NEWS

    ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಛಾಯಾಗ್ರಾಹಕನಿಗೆ ನೆರವಾದ ಕರಾಟೆ ಪಟುಗಳು

    ಉಡುಪಿ ಸೆಪ್ಟೆಂಬರ್ 26: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಛಾಯಾಗ್ರಾಹಕನಿಗೆ ಕರಾಟೆ ಪಟುಗಳು ಬಣ್ಣದ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೆರವಾಗಿದ್ದಾರೆ.


    ಪರ್ಕಳ ಇಲ್ಲಿನ ಅಂತರ್ ರಾಷ್ಟ್ರೀಯ ಕರಾಟೆ ಪ್ರಶಸ್ತಿ ವಿಜೇತೆ ಶಿಕ್ಷಕಿ ಪ್ರವೀಣಾ ಸುವರ್ಣ ರವರು ಹಾವಂಜೆ ಖ್ಯಾತ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಕೀಳಂಜೆಗೆ ಅವರು ಆರೋಗ್ಯ ಸಮಸ್ಯೆ ಸಂಪೂರ್ಣ ಹದಗೆಟ್ಟು ಆರ್ಥಿಕ ಸಂಕಷ್ಟದಲ್ಲಿದ್ದು, ಈ ಹಿನ್ನಲೆ ಪಿಕೆಸಿ ಕರಾಟೆ ಕ್ಲಬ್ ತಂಡದ ಸದಸ್ಯರು ಚೌತಿಯ ದಿನದಂದು ಬಣ್ಣದ ವೇಷ ಧರಿಸಿ ‌ ಊರೆಲ್ಲ ಸುತ್ತಾಡಿ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ಒಟ್ಟು ಮಾಡಿದ್ದರು.

    ಈ ಹಣವನ್ನು ಹಾವಂಜೆಯ ಕೀಳಿಂಜೆಯಲ್ಲಿರುವ ಮನೆಗೆ ಭೇಟಿ ಮಾಡಿ ಸಾರ್ವಜನಿಕರು ನೀಡಿದ ಹಣವನ್ನು ಛಾಯಾಗ್ರಾಹಕ ಗಣೇಶ್ ಶೆಟ್ಟಿ ಕೀಳಂಜೆಗೆ ಹಸ್ತಾಂತರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply