Connect with us

    LATEST NEWS

    ಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ಜಾರಿಗೆ ಒತ್ತಾಯಿಸಿ – ಸಿಎಂ ಗೆ ಪತ್ರ ಬರೆದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು

    ಉಡುಪಿ : ಗೋವಂಶ ಹತ್ಯೆ ನಿಷೇಧಕ್ಕೆ ಪ್ರಬಲ ವಾದ ಕಾನೂನು ಜಾರಿಗೆ ಒತ್ತಾಯಿಸಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸಿಎಂ ಗೆ ಪತ್ರ ಬರೆದಿದ್ದಾರೆ.


    ಪ್ರಸಕ್ತ ಅಧಿವೇಶನದಲ್ಲೇ ಕಾನೂನು ಜಾರಿಗೆ ಆಗ್ರಹಿಸಿದ್ದಾರೆ. ಕರಾವಳಿ ಪರಿಸರ ಮತ್ತು ರಾಜ್ಯದಲ್ಲಿ ಗೋಹತ್ಯೆ ನಿರಂತರವಾಗಿದೆ. ಗೋಕಳ್ಳತನ ನಡೆಸಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಲಾಗುತ್ತದೆ. ಪ್ರಬಲವಾದ ಕಾನೂನು ನಿಂದಷ್ಟೇ ಇದನ್ನು ತಡೆಗಟ್ಟಬಹುದಾಗಿದೆ ಎಂದು ಸ್ವಾಮೀಜಿ ಗಮನ ಸೆಳೆದಿದ್ದಾರೆ.

    ಗೋ ವಂಶದ ಹತ್ಯೆ ತಡೆಗಟ್ಟಿ ಗೋ ಸಂತತಿಯನ್ನು ಉಳಿಸಬೇಕು. ಇದಕ್ಕಾಗಿ ಪ್ರಬಲವಾದ ಕಾನೂನು ಜಾರಿ ಮಾಡಿ.ಪ್ರ ಸಕ್ತ ಅಧಿವೇಶನದಲ್ಲೇ ಮಂಡಿಸಿ ಜಾರಿಗೊಳಿಸಿ. ನಾಡಿನ ಸಮಸ್ತ ಗೋ ಪ್ರೇಮಿಗಳು ಪಶು ಪ್ರೇಮಿಗಳ ಆಗ್ರಹವನ್ನು ಮನ್ನಿಸಿ ಎಂದು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply