KARNATAKA
ಉತ್ತರ ಕನ್ನಡದಲ್ಲಿ ಕಾಂಗ್ರೆಸ್ಗೆ ತಲೆನೋವು ತಂದ ಶಿವರಾಮ್ ಹೆಬ್ಬಾರ್ ವಿರುದ್ಧ ಪೇಸಿಎಂ ಪೋಸ್ಟರ್..!
ಕಾರವಾರ : ಬಿಜೆಪಿ ನಾಯಕ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರಲು ತುದಿಗಾಲಲ್ಲೇ ನಿಂತಿರುವ ಪರ್ವ ಕಾಲದಲ್ಲಿ ಅವರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಪೋಸ್ಟರ್ ಚಳವಳಿ ಆರಂಭವಾಗಿದೆ.
ರಾಜ್ಯಾದ್ಯಂತ ಸಂಚಾಲನ ಮೂಡಿಸಿದ್ದ ಪೇಸಿಎಂ ಅಭಿಯಾನ ಈಗ ಶಿವರಾಮ ಹೆಬ್ಬಾರ್ ವಿರುದ್ಧ ಕೈ ಕಾರ್ಯಕರ್ತರು ನಡೆಸುತ್ತಿದ್ದಾರೆ. ಈ ಮೂಲಕ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸೇರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಪೇ ಸಿಎಂ ಪೋಸ್ಟರ್ ಗಳನ್ನ ಬಾಗಿಲಿಗೆ ಅಂಟಿಸಿದ್ದಾರೆ. ನಮ್ಮ ಪಕ್ಷ ನಮ್ಮ ಹಕ್ಕು ಭ್ರಷ್ಟರಿಗೆ ಜಾಗವಿಲ್ಲ ಎಂಬ ಪೋಸ್ಟರ್, ಡೀಲ್ ನಿಮ್ದು ಕಮಿಷನ್ ನಮ್ದು. ಆಹಾರದ ಕಿಟ್ ಗೆ ಪೆಟಿಎಂ ಮಾಡಿ ಎಂದು ಪೋಸ್ಟ್ರರ್. ಕ್ಯೂ.ಆರ್ ಕೋಡಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಪೋಸ್ಟರ್ ಅಂಟಿಸಲಾಗಿದೆ. ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಹಿನ್ನಲೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರೇ ಇದನ್ನು ಅಂಟಿಸಿರುವ ಗುಮಾನಿ ವ್ಯಕ್ತವಾಗಿದೆ.
You must be logged in to post a comment Login