Connect with us

    LATEST NEWS

    ರಮ್ ಕುಡಿದರೆ ಕೊರೊನಾ ಬರಲ್ಲ ಅಂದ ಕಾಂಗ್ರೇಸ್ ನಗರಸಭಾ ಸದಸ್ಯನಿಗೆ ಕೊರೊನಾ ಸೊಂಕು….?

    ಮಂಗಳೂರು ಅಗಸ್ಟ್ 7: ರಮ್ ಕುಡಿದರೆ ಕೊರೊನಾ ಬರಲ್ಲ ಎಂದು ವಿಡಿಯೋ ಮಾಡಿದ್ದ ಕಾಂಗ್ರೇಸ್ ಸದಸ್ಯನಿಗೆ ಈಗ ಕೊರೊನಾ ಬಂದಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿಸಿದ್ದಾರೆ. ಮಂಗಳೂರಿನ ಉಳ್ಳಾಲದ ನಗರಸಭೆ ಸದಸ್ಯರಾಗಿರುವ ಪಾನಕ ರವಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಸ್ವತ ಪಾನಕ ರವಿ ಸ್ಪಷ್ಟನೆ ನೀಡಿದ್ದು, ನನಗೆ ಕೊರೊನಾ ಬಂದಿರುವ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ.


    “ಒಂದು ಬಾಟಲ್​ ರಮ್​ ಕುಡಿಯಿರಿ. ಇದರ ಜೊತೆಗೆ ಎರಡು ಹಾಫ್​ ಬಾಯ್ಲ್ಡ್​ ಆಮ್ಲೆಟ್​ ಮೇಲೆ ಕಾಳು ಮೆಣಸಿನ ಪೌಡರ್​ ಉದುರಿಸಿ ತಿನ್ನಿ. ಹೀಗೆ ಮಾಡಿದರೆ ಕೊರೋನಾ ಹತ್ತಿರ ಸುಳಿಯುವುದೂ ಇಲ್ಲ. ನಾನು ಇದನ್ನು ರಾಜಕಾರಣಿಯಾಗಿ ಹೇಳುತ್ತಿಲ್ಲ, ಬದಲಿಗೆ ದೇಶದ ಒಬ್ಬ ಪ್ರಜೆಯಾಗಿ ಹೇಳುತ್ತಿದ್ದೆನೆ ”ಎಂದು ರವಿಚಂದ್ರ ಗಟ್ಟಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ರವಿಚಂದ್ರ ಗಟ್ಟಿ ಅವರು ಪಾನಕ ರವಿ ಎಂದೇ ಖ್ಯಾತಿ ಪಡೆದವರು. ಇವರು ಹಾಸ್ಯಪ್ರಜ್ಞೆಗೆ ಹೆಸರು ವಾಸಿಯಾಗಿದ್ದಾರೆ. ಅವರ ಹೆಸರನ್ನು ಬಳಸಿಕೊಂಡು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ವೈರಲ್ ಮಾಡಿದ್ದರು. ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದು, ನನಗೆ ಯಾವುದೇ ಕೊರೊನಾ ಸೊಂಕು ಬಂದಿಲ್ಲ ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply