Connect with us

LATEST NEWS

ನನಗೆ ಟಿಕೆಟ್ ತಪ್ಪಲು ಸಂಸದ ನಳಿನ್ ಕುಮಾರ್ ಕಾರಣ – ಕೃಷ್ಣ ಜೆ ಪಾಲೇಮಾರ್

ನನಗೆ ಟಿಕೆಟ್ ತಪ್ಪಲು ಸಂಸದ ನಳಿನ್ ಕುಮಾರ್ ಕಾರಣ – ಕೃಷ್ಣ ಜೆ ಪಾಲೇಮಾರ್

ಮಂಗಳೂರು ಎಪ್ರಿಲ್ 21: ನನಗೆ ಟಿಕೆಟ್ ತಪ್ಪಿಸಲು ಪ್ರಮುಖ ಕಾರಣ ಸಂಸದ ನಳಿನ್ ಕುಮಾರ್ ಕಟೀಲ್ ಎಂದು ಬಿಜೆಪಿ ಮುಖಂಡ ಮಾಜಿ ಶಾಸಕ ಕೃಷ್ಣ ಜೆ ಪಾಲೇಮಾರ್ ಗಂಭೀರ ಆರೋಪ ಮಾಡಿದ್ದಾರೆ.

ನಿನ್ನೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ ಹೊಸ ಮುಖ ಡಾ. ಭರತ್ ಶೆಟ್ಟಿ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ.

ಈ ಹಿನ್ನಲೆಯಲ್ಲಿ ಮಂಗಳೂರು ಉತ್ತರ ಟಿಕೆಟ್ ವಂಚಿತ ಕೃಷ್ಣ ಜೆ. ಪಾಲೇಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ತನಕವೂ ನನಗೆ ಟಿಕೆಟ್ ಸಿಗಲಿದೆ ಎಂದು ನಂಬಿದ್ದೆ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನನಗೆ ದೂರವಾಣಿ ಕರೆ ಮಾಡಿ ಭಿ ಫಾರ್ಮ್ ಪಡೆಯಲು ಸಿದ್ದರಾಗಿರುವಂತೆ ಸೂಚಿಸಿದ್ದರು.

ನಾನು 23 ರಂದು ನಾಮಪತ್ರ ಸಲ್ಲಿಸಲು ಸಿದ್ದತೆ ನಡೆಸಿದ್ದೆ ಎಂದು ಅವರು ಹೇಳಿದರು,.

ಆದರೆ ಕೊನೆಯ ಕ್ಷಣದಲ್ಲಿ ನನಗೆ ಟಿಕೆಟ್ ನ್ನು ತಪ್ಪಿಸಲಾಗಿದ್ದು, ಇದಕ್ಕೆ ಮೂಲ ಕಾರಣ ಸಂಸದ ನಳಿನ್ ಕುಮಾರ್ ಕಟೀಲ್ ಎಂದು ಆರೋಪಿಸಿದರು.

ತನ್ನ ಜಾತಿಯವರಿಗೆ ಟಿಕೆಟ್ ನೀಡಲು ಸಂಸದ ನಳಿನ್ ಕುಮಾರ್ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಈ ಬಾರಿ ಕೊನೆಯದಾಗಿ ಸ್ಪರ್ಧಿಸುವ ಉದ್ದೇಶಹೊಂದಿದ್ದೆ ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು ಎಂದರು.

ಆದರೆ ಪಕ್ಷದ ವಿರುದ್ದ ಬಂಡಾಯ ಹೂಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ವಿಡಿಯೋಗಾಗಿ…

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *