Connect with us

    LATEST NEWS

    ದೇವರನ್ನೇ ಟಾರ್ಗೆಟ್ ಮಾಡೋರ ಬಗ್ಗೆ ನಾನು ಏನೂ ಹೇಳಲ್ಲ -ಜಯಮಾಲಾ

    ದೇವರನ್ನೇ ಟಾರ್ಗೆಟ್ ಮಾಡೋರ ಬಗ್ಗೆ ನಾನು ಏನೂ ಹೇಳಲ್ಲ -ಜಯಮಾಲಾ

    ಉಡುಪಿ ನವೆಂಬರ್ 21: ಎಲ್ಲರೂ ಅವರ ಆತ್ಮಮುಟ್ಟಿಕೊಂಡು ವಿಚಾರ ಮಾಡಲಿ. ಈ ದೇಶ ಎಲ್ಲವನ್ನೂ ಗಮನಿಸ್ತಾ ಇದೆ ಮರಿಬೇಡಿ. ಅರ್ಧ ಆಕಾಶ ಅರ್ಧ ಭೂಮಿ ಇದ್ದ ಹಾಗೆ, ಅರ್ಧ ಹೆಣ್ಮಕ್ಕಳಿದ್ದಾರೆ. ದೇವರು ನನ್ನ ನಂಬಿಕೆ . ದೇವರು ನನಗೆ ಬದುಕು. ದೇವರನ್ನೇ ಟಾರ್ಗೆಟ್ ಮಾಡೋರ ಬಗ್ಗೆ ನಾನು ಏನೂ ಹೇಳಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಕಿಡಿಕಾರಿದ್ದಾರೆ.

    ಕೇರಳದಲ್ಲಿ ನಡೆಯುತ್ತಿರುವ ಶಬರಿಮಲೆ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು ನಮಗೆ ಜೀವನದ ಗೆರೆ ಹಾಕಿಕೊಟ್ಟದ್ದು ದೇವರು, ನಂಬಿಕೆ, ದೇವಸ್ಥಾನ , ಪರ, ವಿರೋಧ ಏನೂ ಹೇಳಲ್ಲ.ನೋ ಕಮೆಂಟ್ಸ್ ಮೇಲಿರುವ ದೇವರೇ ಎಲ್ಲಾ ನೋಡ್ಕೋತಾರೆ ಎಂದು ಅವರು ಪ್ರತಿಕ್ರಿಯಿಸಿದರು.

    ಸಿಎಂ ಕುಮಾರಸ್ವಾಮಿ ರೈತ ಮಹಿಳೆಯ ಕುರಿತು ಹೇಳಿದ ಹೇಳಿಕೆಯನ್ನು ಕೇಳಿದ್ದೇನೆ, ಅವರ ಮಾತಿನ ಅರ್ಥ, ಭಾವನೆ ಮಹಿಳೆಯರ ವಿರುದ್ದ ಇರಲಿಲ್ಲ. ಹೋರಾಟ ಮಾಡಿದ ರೈತ ಮಹಿಳೆಗೆ ಅವಮಾನ ಮಾಡಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಮರ್ಥಿಸಿ ಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply