Connect with us

    National

    ಮದ್ಯ ಸಿಗಲಿಲ್ಲವೆಂದು ಸ್ಯಾನಿಟೈಸರ್ ಕುಡಿದು 9 ಸಾವು !!

    ಅಮರಾವತಿ, ಜುಲೈ 31: ಮದ್ಯ ಸಿಗದೆ ಬೇಸತ್ತ ಕುಡುಕರು ಸ್ಯಾನಿಟೈಸರ್ ಗೆ ನೀರು ಬೆರಸಿ ಕುಡಿದ ಪರಿಣಾಮ ಒಂಬತ್ತು ಜನ ಪ್ರಾಣ ಬಿಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಪ್ರಕಾಶಂ ಜಿಲ್ಲೆಯ ಎಸ್ಪಿ ಸಿದ್ಧಾರ್ಥ್ ಕೌಶಲ್, ಈ ಸುದ್ದಿಯನ್ನು ದೃಢಪಡಿಸಿದ್ದು ಕುರಿಚಿಮೇಡು ಗ್ರಾಮದ ಜನರು ಸ್ಯಾನಿಟೈಸರ್ ಗೆ ನೀರು ಮತ್ತು ತಂಪು ಪಾನೀಯಗಳನ್ನು ಬೆರಸಿ ಕುಡಿಯುತ್ತಿದ್ದರು. ಕಳೆದ ಹತ್ತು ದಿನಗಳಿಂದ ಅಲ್ಲಿನ ಕೆಲವು ಜನರು ಅಲ್ಕೊಹಾಲ್ ಅಂಶ ಇರುವ ಸ್ಯಾನಿಟೈಸರ್ ಗಳನ್ನು ತಂದು ಕುಡಿಯುತ್ತಿದ್ದಾರೆಂದು ಅಲ್ಲಿ ಮೃತಪಟ್ಟವರ ಸಂಬಂಧಿಕರು ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.

    ಕುರಿಚಿಮೇಡು ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದು ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಮದ್ಯ ವ್ಯಸನಿಗಳು ಹಳ್ಳಿ ಕಡೆಯ ಸಾರಾಯಿ ಸಿಗದೇ ಇದ್ದಾಗ ಮದ್ಯದ ಅಂಶಗಳಿರುವ ಸ್ಯಾನಿಟೈಸರ್ ಗಳನ್ನು ಕುಡಿತಕ್ಕೆ ಬಳಸಿದ್ದಾರೆ.  ಕುರಿಚಿಮೇಡು ಪ್ರದೇಶದ ದೇವಸ್ಥಾನದ ಬಳಿ ಇಬ್ಬರು ಮೃತಪಟ್ಟಿದ್ದರು. ಆರು ಮಂದಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಸಾವಿಗೀಡಾಗಿದ್ದಾರೆ. ಕೋಮಾ ಸ್ಥಿತಿಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಗೆ ತಲುಪುವ ಮೊದಲೇ ಸಾವುಗೀಡಾಗಿದ್ದ. ಇನ್ನೂ ಹಲವರು ಇದೇ ರೀತಿ ಸ್ಯಾನಿಟೈಸರ್ ಕುಡಿದು ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply