Connect with us

    KARNATAKA

    ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ನೈಜೀರಿಯನ್ ಪ್ರಜೆ ..!

    ಬೆಂಗಳೂರು, ಮೇ 26 : ಡ್ರಗ್ ಪ್ರಕರಣದ ಆರೋಪಿಯೊಬ್ಬ ಪೊಲೀಸರಿಂದ ಎಸ್ಕೇಪ್ ಆಗುವ ಯತ್ನದಲ್ಲಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮೃತನನ್ನು ನೈಜೀರಿಯನ್ ಮೂಲದ ಡ್ರಗ್ ಮಾರಾಟ ಜಾಲದ  ಆರೋಪಿ ಪೀಟರ್ ಎಂದು ಗುರುತ್ತಿಸಲಾಗಿದೆ. ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಬಳಿ ಈ ಘಟನೆ ನಡೆದಿದೆ.

    ಡ್ರಗ್ ಪೆಡ್ಲಿಂಗ್ ಪ್ರಕರಣದ ಆರೋಪಿಯಾಗಿದ್ದ ಪೀಟರ್ ನನ್ನು ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಕಲ್ಕೆರೆಗೆ ಜಿಗಿದಿದ್ದ. ಕೆರೆ ಬದಿಯ ಗಟ್ಟಿಯಾದ ಕಟ್ಟೆ ತಗುಲಿ‌ ಪ್ರಜ್ಞೆ ತಪ್ಪಿದ್ದ ಎಂದು ತಿಳಿದು ಬಂದಿದೆ.

    ತಕ್ಷಣ ರಾಮಮೂರ್ತಿ ನಗರ ಠಾಣಾ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪೀಟರ್ ಸಾವನ್ನಪಿದ್ದಾನೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply