Connect with us

    KARNATAKA

    ಎನ್‌ಐಎ ಅಧಿಕಾರಿಗಳ ಕಾರ್ಯಾಚರಣೆ : ಬೆಂಗಳೂರಿನಲ್ಲಿ ಇಬ್ಬರು ಉಗ್ರರ ಬಂಧನ.

    ಬೆಂಗಳೂರು, ಅಕ್ಟೋಬರ್ 8: ಬೆಂಗಳೂರು ಮಾಡ್ಯೂಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

    ಬಂಧಿತ ಆರೋಪಿಗಳನ್ನು ಅಹಮ್ಮದ್​ ಅಬ್ದುಲ್​ ಕೇಡರ್​ ಮತ್ತು ಇರ್ಫಾನ್​​​ ನಾಸಿರ್​​ ಬಂಧಿತ ಆರೋಪಿಗಳಾಗಿದ್ದಾರೆ. ಅಹ್ಮದ್​ ಅಬ್ದುಲ್​ ಕೇಡರ್​ ಚೆನ್ನೈನ ಬ್ಯಾಂಕ್​​ನಲ್ಲಿ ವ್ಯವಹಾರ ವಿಶ್ಲೇಷಕ ಹಾಗೂ ಇರ್ಫಾನ್​ ನಾಸಿರ್​ ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

    ಇಬ್ಬರು ಆರೋಪಿಗಳನ್ನ ಇಂದು ಬೆಂಗಳೂರಿನ ವಿಶೇಷ ಎನ್​ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ 10 ದಿನಗಳ ಕಾಲ ವಿಚಾರಣೆಗೋಸ್ಕರ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುವ ಕಾರ್ಯ ಮುಂದುವರೆದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply