Connect with us

    LATEST NEWS

    ಮುಂದುವರಿದ ಎನ್ ಎಚ್ ಎಂ ಗುತ್ತಿಗೆ ಆಧಾರಿತ ನೌಕರರ ಪ್ರತಿಭಟನೆ

    ಉಡುಪಿ ಅಕ್ಟೋಬರ್ 3: ಎನ್ ಎಚ್ ಎಂ ಗುತ್ತಿಗೆ ಆಧಾರಿತ ನೌಕರರು ಎರಡನೇ ದಿನ ಬೀದಿಗಿಳಿದು ಹೋರಾಟ ಮುಂದುವರೆಸಿದ್ದಾರೆ. ವೇತನ ಹೆಚ್ಚಳ, ಭತ್ಯೆ ನೀಡುವಂತೆ ಒತ್ತಾಯಿಸಿ ಹುತಾತ್ಮ ಸ್ಮಾರಕದೆರುರು ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದೆ.

    ನಿನ್ನೆ ಡಿಎಚ್ಒ ಕಚೇರಿ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ಎನ್ ಎಚ್ ಎಂ ಗುತ್ತಿಗೆ ನೌಕರರು, ಇಂದು ಅಜ್ಜರಕಾಡಿಗೆ ಪ್ರತಿಭಟನೆ ಶಿಫ್ಟ್ ಆಗಿದೆ. ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು. ಇದು ನಾವು ಎರಡನೇ ಹಂತದ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ.

    ಸರಕಾರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಮಗೆ ಚಪ್ಪಾಳೆ, ಶುಭಕೋರುವ ಅಗತ್ಯ ಇಲ್ಲ. ಸಮಾನ ವೇತನ ಜಾರಿಗೊಳಿಸಿ ಎಂದು ಒತ್ತಾಯಿಸಿದರು. ಸೋಮವಾರ ಉಡುಪಿಯಿಂದ ಮಣಿಪಾಲ ಜಿಲ್ಲಾಧಿಕಾರಿ ಚಲೋ ಕಾರ್ಯಕ್ರಮ ಆಯೋಜಿಸುವುದಾಗಿ ಸಂಘಟನೆ ಮುಖಂಡರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply