KARNATAKA
ಚಾರ್ಮಾಡಿಯಲ್ಲಿ ವಧುವರರಿದ್ದ ಮದುವೆ ಬಸ್ ಕಂದಕಕ್ಕೆ ಬಿದ್ರೂ ಸೇಫ್..!
ಚಿಕ್ಕಮಗಳೂರು, ನವೆಂಬರ್ 11 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿವಾಹವಾಗಿ ಚಿಕ್ಕಮಗಳೂರಿಗೆ ವಾಪಾಸಾಗುತ್ತಿದ್ದ ನವ ವಧು-ವರರ ವಾಹನ ಪಲ್ಟಿಯಾದ ಘಟನೆ ಇಂದು ಚಾರ್ಮಾಡಿ ಘಾಟ್ ನ ನಾಲ್ಕನೇ ತಿರುವಿನಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟ್ ನ ನಾಲ್ಕನೇ ತಿರುವಿನಲ್ಲಿ ಪಲ್ಟಿಯಾದ ವಾಹನ ಕಂದಕ್ಕೆ ಉರುಳಿದೆ. ಆದರೆ ಧರ್ಮಸ್ಥಳ ಮಂಜುನಾಥ ದೇವರ ಕೃಪೆಯಿಂದ ವಧುವರರೂ ಸೇರಿ ಎಲ್ಲರೂ ಸೇಫಾಗಿ ಪಾರಾಗಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
You must be logged in to post a comment Login