LATEST NEWS
ಬದರಿ ನಾರಾಯಣನಿಗೆ ನೂತನ ರಜತ ದೀಪ ಕಾಶೀ ಮಠ ಸಂಸ್ಥಾನದ ವತಿಯಿಂದ ಸಮರ್ಪಣೆ
ಬದರಿ ನಾರಾಯಣನಿಗೆ ನೂತನ ರಜತ ದೀಪ ಕಾಶೀ ಮಠ ಸಂಸ್ಥಾನದ ವತಿಯಿಂದ ಸಮರ್ಪಣೆ
ಮಂಗಳೂರು ಸೆಪ್ಟೆಂಬರ್ 21: ಪವಿತ್ರ ಪುಣ್ಯ ಕ್ಷೇತ್ರ ಗಳಲ್ಲಿ ಒಂದಾದ ಉತ್ತರಾಖಂಡದ ಶ್ರೀ ಬದರೀನಾಥ ಕ್ಷೇತ್ರದ ಶ್ರೀ ಬದರಿನಾಥ ದೇವರಿಗೆ ದಿನನಿತ್ಯ ದೇವರ ಸಮ್ಮುಖದಲ್ಲಿ ದೀಪ ಬೆಳಗುವ ದ್ರಷ್ಟಿಯಲ್ಲಿ ಹಾಗೂ ಜಿ . ಯಸ್ . ಬಿ ಸಮಾಜದ ಉತ್ತಮ ಏಳಿಗೆಗಾಗಿ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ ರಜತ ದೀಪ ಶ್ರೀ ದೇವರಿಗೆ ಶ್ರೀಗಳವರ ದಿವ್ಯ ಹಸ್ತಗಳಿಂದ ಸಮರ್ಪಿಸಲಾಯಿತು.
ಸಾಂಕೇತಿಕವಾಗಿ ಶ್ರೀ ಗಳವರು ದೀಪ ಬೆಳಗಿಸಿ ರಜತ ದೀಪವನ್ನು ಬದರೀನಾಥ ಕ್ಷೇತ್ರಕ್ಕೆ ಕಳುಹಿಸಿ ಕೊಡಲಾಯಿತು . ಈ ರಜತ ದೀಪ ತಯಾರಿಸಲು ಸುಮಾರು 35 ಕೆ . ಜಿ . ಬೆಳ್ಳಿಯನ್ನು ಉಪಯೋಗಿಸಲಾಗಿದೆ .
You must be logged in to post a comment Login