Connect with us

    National

    ನೇಪಾಳ ಸಶಸ್ತ್ರ ಪೊಲೀಸ್ ಪಡೆಯಿಂದ ಭಾರತೀಯರ ಮೇಲೆ ಗುಂಡಿನ ದಾಳಿ ಓರ್ವ ಸಾವು.

    ಇಬ್ಬರು ಗಂಭೀರ ಗಾಯಗೊಂಡಿದ್ದು, ಓರ್ವ ನೇಪಾಳ ಪೊಲೀಸರು ವಶಕ್ಕೆ

    ಬಿಹಾರ ಜೂನ್ 12: ಭಾರತದ ಭೂ ಭಾಗಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಿದ ನೇಪಾಳ, ಈಗ ಭಾರತದ ಜೊತೆ ತನ್ನ ಭಿನ್ನಾಭಿಪ್ರಾಯವನ್ನು ಮುಂದುವರೆಸುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಭಾರತ ಹಾಗೂ ನೇಪಾಳ ಗಡಿ ಭಾಗದಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಭಾರತದ ಒಬ್ಬ ನಾಗರೀಕ ಮೃತಪಟ್ಟಿದ್ದಾರೆ.


    ಈ ಘಟನೆ ಭಾರತ ಮತ್ತು ನೇಪಾಳ ಗಡಿಭಾಗದಲ್ಲಿರುವ ಲಾಲ್​ಬಂದಿ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಬ್ಬನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.


    ಮೃತ ಯುವಕನನ್ನು ದಿನೇಶ್​ ಕುಮಾರ್​ (25 ಎಂದು ಗುರುತಿಸಲಾಗಿದೆ. ಉಮೇಶ್​ ರಾಮ್​ ಮತ್ತು ಉದಯ್​ ಠಾಕೂರ್​ ಗಾಯಗೊಂಡವರು. ಉಮೇಶ್​ ರಾಮ್​ನ ಬಲಗೈಗೆ ಗಾಯವಾಗಿದ್ದರೆ, ಒಂದು ಗುಂಡು ಉದಯ್​ ಠಾಕೂರ್​ನ ತೊಡೆಯನ್ನು ಹೊಕ್ಕಿದೆ ಎನ್ನಲಾಗಿದೆ. ಲಗನ್​ ರಾಯ್​ ಎಂಬಾತನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.


    ಶುಕ್ರವಾರ ಬೆಳಗ್ಗೆ 8.45ರಲ್ಲಿ ಗಡಿ ಭಾಗದ ಸೀತಾಮಾರಿ ಜಿಲ್ಲೆಯ ಜಾನಕಿನಗರ ಗ್ರಾಮದ ಈ ಯುವಕರು ನೇಪಾಳದ ಗಡಿ ಭಾಗಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನೇಪಾಳ ಸಶಸ್ತ್ರ ಪೊಲೀಸರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ಸಶಸ್ತ್ರ ಸೀಮಾ ಬಲ್​ನ (ಎಸ್​ಎಸ್​ಬಿ) ಐಜಿ ಸಂಜಯ್​ಕುಮಾರ್​ ಈ ವಿಷಯವನ್ನು ಖಚಿತಪಡಿಸಿದ್ದಾರೆ.

    ಗಾಯಾಳುಗಳನ್ನು ಸೀತಾಮಾರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಲಾಲ್​ಬಂದಿ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿದೆ. ಸದ್ಯ ಗುಂಡಿನ ದಾಳಿ ನೇಪಾಳದ ಗಡಿಯೊಳಗೆ ನಡೆದಿದೆ. ಆದ್ದರಿಂದ, ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply