Connect with us

    DAKSHINA KANNADA

    ಪೊಲೀಸರ ನಿರ್ಲಕ್ಷ – ಮುಳುಗಡೆಯಾದ ಹೊಸ್ಮಠ ಸೇತುವೆ ಮೇಲೆ ವಾಹನ ಸಂಚಾರ

    ಪೊಲೀಸರ ನಿರ್ಲಕ್ಷ – ಮುಳುಗಡೆಯಾದ ಹೊಸ್ಮಠ ಸೇತುವೆ ಮೇಲೆ ವಾಹನ ಸಂಚಾರ

    ಪುತ್ತೂರು ಜುಲೈ 10: ಭಾರೀ ಮಳೆಯಿಂದಾಗಿ ಕಡಬ ಸಮೀಪದ ಹೊಸ್ಮಠ ಸೇತುವೆ ಮುಳುಗಡೆಯಾಗಿದ್ದರೂ ಅದೇ ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ಚಲಾಯಿಸಲಾಗುತ್ತಿದೆ.

    ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಹೊಸ್ಮಠ ಸೇತುವೆ ಮಳೆಗಾಲದ ಸಮಯದಲ್ಲಿ ಕೆಲವು ಸಂದರ್ಭಗಳಲ್ಲಿ ಮುಳುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ವಾಹನಗಳನ್ನು ಈ ಸೇತುವೆ ಮೂಲಕ ಸಂಚರಿಸದಂತೆ ತಡೆಯೊಡ್ಡಲಾಗುತ್ತದೆ.

    ಆದರೆ ಇಂದು ಸೇತುವೆಯ ಬಳಿ ಯಾವುದೇ ಪೋಲೀಸ್ ಕಾವಲು ಇಲ್ಲದ ಕಾರಣ ನೀರು ತುಂಬಿದ ಸೇತುವೆಯ ಮೇಲೆ ವಾಹನಗಳು ಅಪಾಯಕಾರಿಯಾಗಿ ಸಂಚರಿಸುತ್ತಿತ್ತು. ಏಳೆಂಟು ವರ್ಷಗಳ ಹಿಂದೆ ಇದೇ ರೀತಿ ನೀರು ಹರಿಯುತ್ತಿದ್ದ ಈ ಸೇತುವೆಯಲ್ಲಿ ಲಾರಿಯೊಂದು ಸಾಗಿದ ಪರಿಣಾಮ ಲಾರಿ ನೀರು ಪಾಲಾಗಿ ಅದರಲ್ಲಿದ್ದ ಇಬ್ಬರು ಸಾವಿಗೀಡಾದ ಘಟಬೆಯೂ ನಡೆದಿತ್ತು.

    ಇಷ್ಟೊಂದು ಅಪಾಯಕಾರಿ ಸೇತುವೆಯಲ್ಲಿ ಈ ರೀತಿಯಲ್ಲಿ ವಾಹನ ಸಂಚಾರಕ್ಕೆ ತಡೆ ನೀಡದ ಕಡಬ ಪೋಲೀಸರ ನಿರ್ಲಕ್ಷಕ್ಕೆ ಇದೀಗ ವ್ಯಾಪಕ ಖಂಡನೆಯೂ ವ್ಯಕ್ತವಾಗುತ್ತಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply