Connect with us

    BANTWAL

    ಹೆದ್ದಾರಿಯಲ್ಲಿ ವಾಹನಗಳ ದರೋಡೆಗೆ ಸಂಚು ಐವರು ನಟೋರಿಯಸ್ ಕ್ರಿಮಿನಲ್‌ಗಳ ಬಂಧನ

    ಹೆದ್ದಾರಿಯಲ್ಲಿ ವಾಹನಗಳ ದರೋಡೆಗೆ ಸಂಚು ಐವರು ನಟೋರಿಯಸ್ ಕ್ರಿಮಿನಲ್‌ಗಳ ಬಂಧನ

    ಬಂಟ್ವಾಳ ಸೆಪ್ಟಂಬರ್ 4: ಹೆದ್ದಾರಿಯಲ್ಲಿ ವಾಹನಗಳ ದರೋಡೆಗೆ ಹೊಂಚು ಹಾಕಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಗೊಳ್ತಮಜಲಿನ ಉಮ್ಮರ್ ಫಾರೂಕ್, ಮಂಗಿಳ ಪದವಿನ ಮಹಮ್ಮದ್ ಅಬೂಬಕ್ಕರ್,ಮಂಚಿಯ ಅಬ್ದುಲ್ ಖಾದರ್, ರಮೀಜ್ ಮತ್ತು ಬಾಳ್ತಿಲದ ಖಲೀಲ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಅರೋಪಿ ಅಕ್ಬರ್ ಎಮಬಾತ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಇಂದು ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮಂಚಿ ಗ್ರಾಮ ಮಂಚಿ ಕಟ್ಟೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದ ಈ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳಿಂದ ಎರಡೂ ಮೋಟಾರು ಸೈಕಲ್ ಮತ್ತು ಆಕ್ಟಿವಾ ಹೋಂಡಾ ದ್ವಿಚಕ್ರವಾಹಗಳನ್ನು, ಕಬ್ಬಿಣದ ಹಿಡಿ ಇರುವ ಕಬ್ಬಿಣದ ಕೊಕ್ಕೆ, ಕತ್ತಿ,ಚೂರಿ, ಗರಗಸ, ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ.

    ಹೆದ್ದಾರಿಯಲ್ಲಿ ಹೋಗುವ ಲಾರಿ ಚಾಲಕರನ್ನು ಅಥವಾ ಇನ್ಯಾವುದಾದರೂ ವಾಹನದ ಚಾಲಕರನ್ನು ದರೋಡೆ ಮಾಡುವ ಉದ್ದೇಶದಿಂದ ಇವರು ಹೊಂಚು ಹಾಕಿ ಕೂತಿದ್ದರು ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

    ಆರೋಪಿಗಳ ಪೈಕಿ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಮತ್ತು ಖಲೀಲ್ ಯಾನೆ ಇಬ್ರಾಹಿಂ ಖಲೀಲ್ ಎಂಬವರುಗಳ ಮೇಲೆ ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply