Connect with us

    LATEST NEWS

    ನಂತೂರು ಮತ್ತು ಕೆಪಿಟಿ ವೃತ್ತಗಳಲ್ಲಿ ಪ್ರತಿ ಎರಡು ದಿನಕ್ಕೊಮ್ಮೆಯಾದರೂ ಹೊಂಡ ಮುಚ್ಚಲು ಕ್ರಮವಹಿಸಿ -ಜಿಲ್ಲಾಧಿಕಾರಿ

    ಮಂಗಳೂರು ಜುಲೈ 16: ಬರೀ ಹೊಂಡಗುಂಡಿಗಳಿಂದ ತುಂಬಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಂತೂರು ಹಾಗೂ ಕೆಪಿಟಿ ಜಂಕ್ಷನ್ ಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


    ವಾಹನದಟ್ಟನೆಯಿಂದ ಕೂಡಿರುವ ಈ ಜಂಕ್ಷನ್ ಗಳಲ್ಲಿ ಬೃಹತ್ ಗಾತ್ರದ ಹೊಂಡಗುಂಡಿಗಳಿಂದಾಗಿ ವಾಹನಗಳು ಸಂಚಾರಕ್ಕೆ ತೊಂದರೆ ಪಡುವ, ದ್ವಿಚಕ್ರ ಸವಾರರು ಅತ್ಯಂತ ಅಪಾಯಕಾರಿಯಾಗಿ ಈ ರಸ್ತೆಗಳಲ್ಲಿ ಸಂಚರಿಸಬೇಕಾದ ಪರಿಸ್ಥಿಯನ್ನು ಗಮನಿಸಿದ ಜಿಲ್ಲಾಧಿಕಾರಿ ತುರ್ತು ದುರಸ್ತಿ ಕಾಮಗಾರಿಯನ್ನು ಕೈಗೊಂಡು ರಸ್ತೆಯನ್ನು ವಾಹನ ಸಂಚಾರ ಯೋಗ್ಯವನ್ನಾಗಿಸಲು ಸೂಚಿಸಿದರು.

    ನಂತೂರು ಹಾಗೂ ಕೆಪಿಟಿಯಲ್ಲಿ ಹೆದ್ದಾರಿಯನ್ನು ರಸ್ತೆಗಳು ಕೂಡುವಲ್ಲಿ ಸೃಷ್ಟಿಯಾಗಿರುವ ಹೊಂಡಗಳನ್ನು ತ್ವರಿತವಾಗಿ ಮುಚ್ಚಬೇಕು.ಇಲ್ಲಿ ಫೇವರ್ ಫಿನಿಶ್ ಡಾಂಬರೀಕರಣ ಮಾಡಬೇಕು ಎಂದು ನಿರ್ದೇಶನ‌ ನೀಡಿದರು. ನಂತೂರು ಮತ್ತು ಕೆಪಿಟಿ ವೃತ್ತಗಳನ್ನು ನಿತ್ಯವೂ ಪರಿಶೀಲಿಸಿ ಪ್ರತಿ ಎರಡು ದಿನಕ್ಕೊಮ್ಮೆಯಾದರೂ ಹೊಂಡ ಮುಚ್ಚಲು ಕ್ರಮವಹಿಸಬೇಕು ಎಂದು ಎನ್ಎಚ್ಎಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply